Connect with us

FILM

ಎರಡನೇ ಮದುವೆಗೆ ಸಿದ್ಧರಾದ ನಟಿ ಆ್ಯಮಿ ಜಾಕ್ಸನ್; ನಿಶ್ಚಿತಾರ್ಥದ ಪೋಟೋ ಹಂಚಿಕೊಂಡ ನಟಿ

Published

on

ಬಾಲಿವುಡ್ ನಟಿ, ರೂಪದರ್ಶಿ ಅಮಿ ಜಾಕ್ಸನ್‌ ತನ್ನ ಪ್ರಿಯಕರ ಹಾಗೂ ನಟ ಎಡ್‌ ವೆಸ್ಟ್‌ವಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ಅಮಿ ಜಾಕ್ಸನ್ ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಹಸೆಮಣೆ ಏರಲಿರುವ ಕುರಿತಾಗಿ ತನ್ನ ಅಭಿಮಾನಿಗಳಿಗೆ ಇರುವ ಕುತೂಹಲವನ್ನು ಹೆಚ್ಚಿಸಿದ್ದಾರೆ.

2022 ರಲ್ಲಿ ಎಡ್‌ ವೆಸ್ಟ್‌ವಿಕ್ ಜೊತೆಗಿನ ತನ್ನ ಸಂಬಂಧವನ್ನು ಇನ್‌ಸ್ಟಾಗ್ರಾಮ್ ಮೂಲಕ ಬಹಿರಂಗ ಪಡಿಸಿದ್ದ ಅಮಿ ಜಾಕ್ಸ್‌ನ ಇದೀಗ ಆತನೊಂದಿಗಿನ ನಿಶ್ಚಿತಾರ್ಥವನ್ನೂ ಕನ್ಫರ್ಮ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ನಟ ಅಕ್ಷಯ್ ಕುಮಾರ್ ಜೊತೆಗಿನ ‘ಸಿಂಗ್ ಈಸ್‌ ಬ್ಲಿಂಗ್‌’ , ನಟ ಪ್ರತೀಕ್ ಬಬ್ಬರ್ ಜೊತೆಗಿನ ‘ಏಕ್‌ ದೀವಾನಾ ಥಾ’ ಮೂಲಕ ಫೇಮಸ್ ಆಗಿದ್ದರು.

ಇತ್ತೀಚೆಗೆ ‘ಗಾಸಿಪ್ ಗರ್ಲ್‌’ ಮತ್ತು ‘ವೈಟ್‌ ಗೋಲ್ಡ್‌’ ಶೋ ಮೂಲಕ ಎಡ್‌ ವೆಸ್ಟ್‌ವಿಕ್ ಫೇಮಸ್ ಆಗಿದ್ದರು.

ಅಮಿ ಜಾಕ್ಸನ್‌ ಇದೀಗ ಎಡ್‌ ವೆಸ್ಟ್‌ವಿಕ್ ಜೊತೆಗಿನ ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ಫೋಟೋಗಳನ್ನು ಶೇರ್ ಮಾಡಿರುವ ಅಮಿ ಜಾಕ್ಸನ್‌ ಭಾವಿ ಪತಿಯೊಂದಿಗಿನ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಂ ಗೆ ಅಪ್‌ಲೋಡ್ ಮಾಡಿದ್ದಾರೆ.


2019 ರಲ್ಲಿ ಜಾರ್ಜ್‌ ಪನಯೊಟೌ ಜೊತೆ ಸುತ್ತಾಡಿದ್ದ ಅಮಿ ಜಾಕ್ಸನ್ ಆತನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅದೇ ವರ್ಷದಲ್ಲಿ ಒಂದು ಗಂಡು ಮಗುವಿನ ತಾಯಿ ಆಗಿದ್ದರು. ಆದರೆ 2021 ರಲ್ಲಿ ಇಬ್ಬರೂ ಬೇರೆ ಬೇರೆಯಾಗಿದ್ದು, ಬಳಿಕ ನಟಿ ಜಾರ್ಜ್‌ ಪನಯೊಟೌ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಇನ್‌ಸ್ಟಾಗ್ರಾಂ ನಿಂದ ಡಿಲೀಟ್ ಮಾಡಿದ್ದಳು.

FILM

ಬಾಲಿವುಡ್ ಬಾದ್ ಶಾಗೆ ಸಂಕಷ್ಟ; ಶಾರುಖ್ ಮನೆಗೆ ಬಿಎಂಸಿ, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ

Published

on

ಮಂಗಳೂರು/ಮುಂಬೈ : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿನಿಮಾಗಳ ಮೂಲಕ ಎಷ್ಟು ಫೇಮಸ್ ಆಗಿದ್ದಾರೋ ಹಾಗೇ ಅವರ ಮನೆ ಕೂಡ ಫೇಮಸ್. ಅವರ ನಿವಾಸ ‘ಮನ್ನತ್’  ಮುಂಬೈನ ಬಾಂದ್ರಾ ಕಡಲ ತೀರದಲ್ಲಿದೆ. ಈ ಐಷಾರಾಮಿ ಬಂಗಲೆಯನ್ನು 2001 ರಲ್ಲಿ 13.01 ಕೋಟಿ ರೂಪಾಯಿಗಳಿಗೆ ಶಾರುಖ್ ಖಾನ್ ಖರೀದಿಸಿದ್ದರು. ಮನೆಯ ನವೀಕರಣ ಕಾರ್ಯ ಮಾಡುವ ಸಲುವಾಗಿ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಹಾಗೂ ಮಕ್ಕಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.  ಈ ನಡುವೆ ಶಾರುಖ್ ಮನೆ ‘ಮನ್ನತ್‌’ಗೆ ಬಿಎಂಸಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಉಲ್ಲಂಘನೆ ಆರೋಪದ ಮೇರೆಗೆ ಮುಂಬೈನ ನಾಗರಿಕ ಸಂಸ್ಥೆ, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ನಟ ಶಾರುಖ್ ಖಾನ್ ವಾಸಿಸುತ್ತಿದ್ದ ಮನ್ನತ್ ಮನೆಯಲ್ಲಿ ಅಕ್ರಮ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂತೋಷ್ ದೌಂಡ್ಕರ್ ಎಂಬವರು ದೂರು ನೀಡಿದ್ದಾರೆ. ಹೀಗಾಗಿ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬಿಎಂಸಿ ಸದಸ್ಯರು ತನಿಖಾ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 

ಇದನ್ನೂ ಓದಿ : Watch Video: ಮಂಗಳೂರಿನಲ್ಲಿ ಜಲಯೋಗದ ಮೂಲಕ ಮೋದಿಗೆ ಪತ್ರ ಬರೆದ ಈಜುಪಟು

ಮ್ಯಾನೇಜರ್ ಹೇಳಿದ್ದೇನು?

ಶಾರುಖ್ ಖಾನ್ ನಿವಾಸ ನವೀಕರಣ ಕಾರ್ಯದ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ಮ್ಯಾನೇಜರ್ ಪೂಜಾ ದದ್ಲಾನಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿಲ್ಲ. ಎಲ್ಲಾ ಕೆಲಸಗಳು ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

Continue Reading

FILM

ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದಕ್ಕೆ ಮನನೊಂದು ನಟ ಆತ್ಮಹತ್ಯೆ

Published

on

ಸಿನಿಮಾದಲ್ಲಿ ಚಾನ್ಸ್ ಸಿಗದಿದ್ದಕ್ಕೆ ಮನನೊಂದು ಮರಾಠಿ ಚಲನಚಿತ್ರದ ನಟ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ತುಷಾರ್ ಘಡಿಗಾಂವ್ಕರ್(32) ಆತ್ಮಹತ್ಯೆ ಮಾಡಿಕೊಂಡ ನಟ. ಜೂನ್ 20, ಶುಕ್ರವಾರದಂದು ಇವರು ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ವೃತ್ತಿಪರ ಅವಕಾಶಗಳ ಕೊರತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ಹಸುವಿನ ಕೆಚ್ಚಲಿಗೆ ಮಚ್ಚಿನಿಂದ ಹೊಡೆದು ಹತ್ಯೆ..!

ನಟ ಅಂಕುರ್ ವಿಠಲರಾವ್ ವಾಧವ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ. ಏಕೆ ಸ್ನೇಹಿತ..? ಯಾವುದಕ್ಕಾಗಿ..? ಕೆಲಸಗಳು ಬರುತ್ತದೆ ಮತ್ತು ಹೋಗುತ್ತದೆ! ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಆದರೆ ಆತ್ಮಹತ್ಯೆ ದಾರಿಯಲ್ಲ! ಪ್ರಸ್ತುತ ಪರಿಸ್ಥಿತಿ ವಿಚಿತ್ರವಾಗಿದೆ ಎಂದು ಒಪ್ಪುತ್ತೇನೆ. ಆದರೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು ತುಷಾರ್ ಘಡಿಗಾಂವ್ಕರ್. ನೀವು ಸೋತರ ನಾವೆಲ್ಲರೂ ಸೋಲುತ್ತೇವೆ” ಎಂದು ಬರೆದಿದ್ದಾರೆ.

Continue Reading

FILM

ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ನಡೆದ ನಟಿ ಶ್ವೇತಾ; ಕಾರಣವೇನು?

Published

on

ಬೆಂಗಳೂರು/ಮಂಗಳೂರು : ಕೌಟುಂಬಿಕ ಕಥಾಹಂದರ ಹೊಂದಿರುವ ಧಾರಾವಾಹಿ ‘ಲಕ್ಷ್ಮೀ ನಿವಾಸ’. ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಯಿಂದ ಇತ್ತೀಚೆಗಷ್ಟೇ ತನು ಪಾತ್ರಧಾರಿ ಯುಕ್ತಾ ಹೊರ ನಡೆದಿದ್ದರು. ಇದೀಗ ಹಿರಿಯ ನಟಿ ಶ್ವೇತಾ ಧಾರಾವಾಹಿ ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಶ್ವೇತಾ ಈ ಧಾರಾವಾಹಿಯಲ್ಲಿ ಲಕ್ಷ್ಮೀಯಾಗಿ ಕಾಣಿಸಿಕೊಂಡಿದ್ದರು. ಗಂಡನಿಗೆ ಸದಾ ಜೊತೆಯಾಗಿ ನಿಲ್ಲುವ ಪತ್ನಿಯಾಗಿ, ಮಕ್ಕಳ ಹಿತ ಬಯಸುವ ತಾಯಿಯಾಗಿ ಮನೋಜ್ಞ ಅಭಿನಯ ನೀಡುತ್ತಿದ್ದರು. ಆದರೆ, ಇದೀಗ ದಿಢೀರಾಗಿ ಧಾರಾವಾಹಿಯಿಂದ ಹೊರ ಬಂದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

ಕಾರಣವೇನು ?

ಧಾರಾವಾಹಿಯಿಂದ ಹೊರಬಂದಿರುವ ವಿಚಾರದ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದ ಲಕ್ಷ್ಮೀ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.  ಬಹಳ ದಯೆಯಿಂದ ವರ್ತಿಸಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು.  ಸೆಟ್‌ನ ಕೆಲವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದಕ್ಕಾಗಿ ಝೀ ಕನ್ನಡ ವಾಹಿನಿಗೆ ಧನ್ಯವಾದಗಳು. ನೀವೆಲ್ಲ  ಅದ್ಭುತ ಮಂದಿ. ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಒಂದೇ ಧಾರಾವಾಹಿಯಲ್ಲಿ ತಾಯಿ, ಮಗ, ಮಗಳು; ಲಕ್ಷ್ಮೀ ನಿವಾಸಕ್ಕೆ ಬಂದ ಹೊಸ ನಟಿ ಯಾರು ಗೊತ್ತಾ?

ಲಕ್ಷ್ಮೀಯಾಗಿ ಮಾಧುರಿ ಎಂಟ್ರಿ :

ಶ್ವೇತಾ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿಯ ಪ್ರವೇಶವಾಗಿದೆ. ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಜನಮನಸೂರೆಗೊಳಿಸಿದ್ದ ಮಾಧುರಿ, ಲಕ್ಷ್ಮೀಯಾಗಿ ಎಂಟ್ರಿ ಕೊಟ್ಟಿದ್ದಾರೆ . ಜಗ್ಗೇಶ್, ಪ್ರಭಾಕರ್, ದೇವರಾಜ್ ಮೊದಲಾದವರ ಜೊತೆ ನಟಿಸಿರುವ ಮಾಧುರಿ ಕನ್ನಡ ಮಾತ್ರವಲ್ಲದೇ ಹಿಂದಿ ಧಾರಾವಾಹಿಗಳಿಗೂ ಬಣ್ಣ ಹಚ್ಚಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page