Connect with us

LATEST NEWS

ಉಡುಪಿ ಹತ್ಯೆ ಪ್ರಕರಣದ ಆರೋಪಿ ಚೌಗುಲೆಗೆ ನ್ಯಾಯಾಂಗ ಬಂಧನ..!

Published

on

ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಆರೋಪಿ ಪ್ರವೀಣ್‌ ಚೌಗಲೆಯ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತನಿಖಾಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ಇದೀಗ ಡಿಸೆಂಬರ್ 5ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಆರೋಪಿ ಚೌಗುಲೆಗೆ ನವೆಂಬರ್ 28 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ಉಡುಪಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ ಇದೀಗ ಮಹಜರು ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವಧಿಗೂ ಮುನ್ನ ಆರೋಪಿಯನ್ನು ಉಡುಪಿ-ಮಲ್ಪೆ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಅಲ್ಲದೆ ಆರೋಪಿಗೆ ಡಿಸೆಂಬರ್ 5 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಉಡುಪಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪೊಲೀಸರು ಭಾರೀ ಬಂದೋಬಸ್ತ್‌ನಲ್ಲಿ ಆರೋಪಿಯನ್ನು ನ್ಯಾಯಾಲಯದ ಆವರಣಕ್ಕೆ ಕರೆತಂದಿದ್ದು, ಇಂದು ಕೂಡಾ ಆರೋಪಿಯನ್ನು ಕಾಣಲೆಂದು ಬಹಳಷ್ಟು ಮಂದಿ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು.

ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ಆರೋಪಿ ಚೌಗುಲೆ ಉಳಿದುಕೊಂಡಿದ್ದ ಮಂಗಳೂರಿನ ಬಿಜೈ ಅಪಾರ್ಟ್‌ಮೆಂಟ್‌ಗೆ ಕರೆ ತರಲಾಗಿತ್ತು. ಅಲ್ಲಿ ಕೃತ್ಯಕ್ಕೆ ಪೂರಕವಾಗಿ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೆ ಆರೋಪಿ ಕೃತ್ಯಕ್ಕೆ ಬಳಸಿದ್ದ ಚೂರಿ ಸಹಿತ ಇನ್ನಿತರ ವಸ್ತುಗಳನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕೃತ್ಯವನ್ನು ತಾನು ಯಾವ ರೀತಿ ಮಾಡಿದ್ದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಚೌಗುಲೆ ತನಿಖಾಧಿಕಾರಿಗಳ ಮುಂದೆ ಬಿಚ್ಚಿಟ್ಟಿದ್ದಾನೆ.

LATEST NEWS

ಬೆಂಗಳೂರಿನಲ್ಲಿ 5ನೇ ತಲೆಮಾರಿನ ಏರ್‌ ಶೋ ಫೈಟರ್ ಜೆಟ್ ನಿರ್ಮಾಣಕ್ಕೆ ಚಾಲನೆ..

Published

on

ಮಂಗಳುರು/ಬೆಂಗಳೂರು : ದೇಶದ ರಕ್ಷಣಾ ಮತ್ತು ಸಂಶೋಧನೆ ಇಲಾಖೆಯಡಿ ಬರುವ ‘ಏರೋನಾಟಿಕಲ್ ಡೆವಲಪ್‌ಮೆಂಟ್‌ ಏಜೆನ್ಸಿ’ಯು (ಎಡಿಎ) ಈ ವಿಮಾನದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನ ‘ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್’ (ಎಎಂಸಿಎ) ದೇಶಿಯವಾಗಿ ಅಭಿವೃದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವಿಮಾನಗಳು ಬೆಂಗಳೂರಿನ ಮಂಡೂರು ಬಳಿಯ ರಕ್ಷಣಾ ಪಡೆಯ 20 ಎಕರೆ ಜಾಗದಲ್ಲಿ ಸ್ಥಾಪಿಸಲಾಗುವ ಹೊಸ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿದೆ.

ಮೊದಲ ವಿಮಾನ 2028ರಲ್ಲಿ: 

“ತೇಜಸ್ ಎಂಬ ಲಘು ಯುದ್ಧ ವಿಮಾನವನ್ನು ನಿರ್ಮಾಣ ಮಾಡಲು 2 ದಶಕಗಳಿಗೂ ಹೆಚ್ಚು ಕಾಲ ಬೇಕಾಗಿತ್ತು. ತೇಜಸ್ ಈಗಾಗಲೇ ಸೇನೆಗೆ ಸೇರ್ಪಡೆಗೊಂಡಿದೆ. ತೇಜಸ್ ನಿರ್ಮಾಣ ವೇಳೆಗಿನ ಸಂಶೋಧನೆಗಳು, ಅನುಭವದ ಆಧಾರದ ಮೇರೆಗೆ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನದ ಸುಧಾರಣೆ ಮತ್ತು ಬದಲಾವಣೆ ಮೂಲಕ ವೇಗವಾಗಿ ಎಎಂಸಿಎಯನ್ನು ಅಭಿವೃದ್ಧಿಪಡಿಸಬಹುದು. 2028ರಲ್ಲಿ ಪ್ರೊಟೋ ಟೈಪ್ ನಿರ್ಮಿಸಿ ಹಾರಾಟ ನಡೆಸಿ 2034ರ ವೇಳೆಗೆ ಭಾರತೀಯ ವಾಯುಸೇನೆಗೆ 18 ವಿಮಾನಗಳ ಒಂದು ಸ್‌ಕ್ವಾಡ್ರನ್ ಅನ್ನು ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಆರಂಭಿಕ ಅಂದಾಜು ವೆಚ್ಚ 15 ಸಾವಿರ ಕೋಟಿ ರು. ಆಗಿದೆ” ಎಂದು ಎಡಿಎ ಅಧಿಕಾರಿಯೊಬ್ಬರು ತಿಳಿಸಿದರು. “ಭಾರತದಲ್ಲಿಯೇ ಈ ವಿಮಾನ ಉತ್ಪಾದನೆಯಾಗುವುದರಿಂದ ವೆಚ್ಚ, ಉಳಿತಾಯ, ಉದ್ಯೋಗ ಸೃಷ್ಟಿ, ರಕ್ಷಣಾ ಕ್ಷೇತ್ರದ ಉದ್ಯಮಗಳ ಬೆಳವಣಿಗೆಯಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಒಂದು ವೇಳೆ ರಫ್ತು ಸಾಧ್ಯವಾದರೆ ಭಾರತಕ್ಕೆ ಅಪಾರ ಆದಾಯ ಬರಲಿದೆ” ಎಂದರು.

ಇದನ್ನೂ ಓದಿ : ಬಂಟ್ವಾಳದಲ್ಲಿ ಭಾರೀ ಅಗ್ನಿ ಅವಘಡ; ಸುಟ್ಟು ಕರಕಲಾದ ಗೋಡೋನ್‌

ಎಎಂಸಿಎ ಯುದ್ಧ ವಿಮಾನದ ವೈಶಿಷ್ಟ್ಯ : 

* ಈ ವಿಮಾನ 2 ಎಂಜಿನ್, ಒಬ್ಬ ಪೈಲಟ್ ಹಾರಾಟ ನಡೆಸಬಹುದು.
* ಈ ಅತ್ಯಾಧುನಿಕ ವಿಮಾನದ ತೂಕ 25 ಟನ್ ಆಗಿದೆ. ಅಂದರೆ ತೂಕ ಕಡಿಮೆ ಇದೆ
* ಗಂಟೆಗೆ 2,500 ಕಿ.ಮೀ ವೇಗದಲ್ಲಿ ಈ ಯುದ್ಧ ವಿಮಾನ ಸಂಚರಿಸಲಿದೆ.
*  1,600 8.2 2 5,300 ಕಿ.ಮೀ ದೂರದವರೆಗೆ ಹಾರಾಟ ನಡೆಸಬಲ್ಲುದು.
* ಕ್ಷಿಪಣಿ, ಬಾಂಬ್, ರಾಕೆಟ್‌ಗಳನ್ನು ಬಚ್ಚಿಟ್ಟುಕೊಂಡು ಹಾರಾಟ ನಡೆಸುವ ವ್ಯವಸ್ಥೆ ಇದೆ.
* ಕಂಪ್ಯೂಟರ್‌ ಮೂಲಕ ವಿಮಾನದ ಸಂಪೂರ್ಣ ವ್ಯವಸ್ಥೆಯ ಮಾನಿಟರಿಂಗ್ ಸಾಧ್ಯವಿದೆ
* ಶತ್ರುರಾಷ್ಟ್ರಗಳ ರೇಡಾರ್ ಕಣ್ಣಪ್ಪಿಸುವ ಅತ್ಯಾಧುನಿಕ ತಂತ್ರಜ್ಞಾನಗಳು ಇದರಲ್ಲಿವೆ.
* ಕೃತಕ ಬುದ್ಧಿಮತ್ತೆ(ಎಐ) ಆಧರಿತ ಎಲೆಕ್ಟ್ರಾನಿಕ್ ಪೈಲಟ್ ಸಿಸ್ಟಂ ಅಳವಡಿಸಲಾಗಿದೆ

Continue Reading

LATEST NEWS

ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಆಗಿದ್ದು ಎಲ್ಲಿ ಗೊತ್ತಾ ?

Published

on

ಮಂಗಳೂರು/ಪ್ರಯಾಗ್‌ ರಾಜ್ : ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಹೊಸ ಹೊಸ ದಾಖಲೆ ಬರೆಯುತ್ತಿದೆ. ಫೆಬ್ರವರಿ 26ಕ್ಕೆ ಮಹಾಕುಂಭ ಮೇಳ ಅಂತ್ಯವಾಗಲಿದೆ. ಹೀಗಾಗಿ ಪ್ರಯಾಗ್‌ ರಾಜ್‌ನತ್ತ ಭಕ್ತಸಾಗರವೇ ಹರಿದು ಬರುತ್ತಿದ್ದು, ಟ್ರಾಫಿಕ್ ಜಾಮ್ ವಿಚಾರದಲ್ಲೂ ದಾಖಲೆ ಬರೆದಿದೆ.

ಮಹಾ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಬರುತ್ತಿರುವ ಕಾರಣ ನೂರಾರು ಕಿ.ಮೀ. ಟ್ರಾಫಿಕ್​ಜಾಮ್​ ಉಂಟಾಗಿದೆ. ಪ್ರಯಾಗರಾಜ್ -ವಾರಾಣಾಸಿ ಮಾರ್ಗದಲ್ಲಿ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್​ ಆಗಿದ್ದು, ಸುಮಾರು 48 ಗಂಟೆವರೆಗೂ ವಾಹನಗಳು ಟ್ರಾಫಿಕ್​ನಲ್ಲಿ ಸಿಲುಕಿಕೊಳ್ತಿವೆ. ಇನ್ನು ಪ್ರಯಾಗರಾಜ್-ಕಾನ್ಪುರ ಮಾರ್ಗದಲ್ಲೂ 25 ಕಿ.ಮೀ.ವರೆಗೂ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ಮಧ್ಯಪ್ರದೇಶ ರಾಜ್ಯದಲ್ಲೇ ಪ್ರಯಾಗರಾಜ್​ನತ್ತ ಬರುವ ವಾಹನಗಳ ಸಂಚಾರವನ್ನು ಬಂದ್‌ ಮಾಡಲಾಗಿದೆ. ಟ್ರಾಫಿಕ್​ನಿಂದಾಗಿ ಸುಮಾರು 50 ಕಿ.ಮೀ.ಸಂಚರಿಸಲು 10-12 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಒಂದೆರೆಡು ಕಿ.ಮೀ.ಸಂಚಾರಕ್ಕೂ ಹೆಚ್ಚಿನ ಸಮಯ ಬೇಕೇ ಬೇಕು. ಆದ್ದರಿಂದ ಮಧ್ಯಪ್ರದೇಶದ ನಗರವಾದ ಕಟ್ನಿಗೂ ಬರಬೇಡಿ ಎಂದು ಭಕ್ತರಲ್ಲಿ ಪೊಲೀಸರ ಮನವಿ ಮಾಡ್ತಿದ್ದಾರೆ.

ರೈಲ್ವೇ ಸ್ಟೇಷನ್ ಬಂದ್

ಬಸಂತ ಪಂಚಮಿಯ ಬಳಿಕ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇತ್ತು. ಆದ್ರೆ ಅದೆಲ್ಲವೂ ಉಲ್ಟಾ ಆಗಿದ್ದು, ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಳವಾಗಿದೆ. ಸದ್ಯ ಪ್ರಯಾಗರಾಜ್‌ನಲ್ಲಿ ಸಾರ್ವಜನಿಕರಿಂದ ಭಾರೀ ಜನದಟ್ಟಣೆಯಿಂದಾಗಿ ಸಂಗಮ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ. ಸಂಗಮ ರೈಲ್ವೇ ಸ್ಟೇಷನ್​ನಿಂದ ಹೊರ ಹೋಗಲು ಪ್ರಯಾಣಿಕರಿಗೆ ತೊಂದರೆಯಾದ ಕಾರಣ ರೈಲ್ವೇ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರ ಹರಸಾಹಸ

ಇನ್ನು ಉತ್ತರಪ್ರದೇಶದ ವಾರಾಣಸಿ, ಲಖನೌ, ಮತ್ತು ಕಾನ್ಪುರ್​ಗಳಲ್ಲಿ ಪ್ರಯಾಗರಾಜ್​ಗೆ ಹೋಗುವ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ತುಳುಕುತ್ತಿವೆ. ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಸುಮಾರು 25 ಕಿಲೋ ಮೀಟರ್​ವರೆಗೂ ಟ್ರಾಫಿಕ್ ಜಾಮ್ ಹರಡಿದೆ. ಪ್ರಯಾಗರಾಜ್​ನಲ್ಲಿಯೇ ಸುಮಾರು 7 ಕಿಲೋ ಮೀಟರ್​ ರಸ್ತೆಯಲ್ಲಿ ವಾಹಗನಗಳು ಅಲುಗಾಡದೆ ಹಾಗೆಯೇ ನಿಂತಿವೆ.

ಇದನ್ನೂ ಓದಿ: ಕಾಪು ಶ್ರೀ ಹೊಸ ಮಾರಿಗುಡಿ ಕ್ಷೇತ್ರ; ಸಂಭ್ರಮದಿಂದ ನಡೆದ ಮೆರವಣಿಗೆ

ಚೀನದ ದಾಖಲೆ ಮುರಿದ ಭಾರತ

ಇನ್ನು ಪ್ರಯಾಗರಾಜ್​ನಿಂದ 400 ಕಿಲೋ ಮೀಟರ್ ದೂರದಲ್ಲಿರುವ ಜಬಲಾಪುರ್​ನಲ್ಲಿಯೂ ಕೂಡ ಸುಮಾರು 15 ಕಿಲೋ ಮೀಟರ್ ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲ ನೆರೆಯ ರಾಜ್ಯಗಳಿಂದ ಪ್ರಯಾಗರಾಜ್​ಗೆ ಹೋಗುವ ಎಲ್ಲಾ ರಸ್ತೆಗಳಲ್ಲಿಯೂ ಕೂಡ ಇದೇ ಸ್ಥಿತಿ ಇದೆ. ಸದ್ಯ ಇದನ್ನು ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕರೆಯಲಾಗುತ್ತದೆ. ಈ ಹಿಂದೆ ಚೀನಾದಲ್ಲಿ 2010ರಲ್ಲಿ ಬೀಜಿಂಗ್ ಟಿಬೆಟ್​ ಎಕ್ಸ್​ಪ್ರೆಸ್​ ಹೈವೇನಲ್ಲಿ ಇದೇ ರೀತಿಯ 100 ಕಿಲೋ ಮೀಟರ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ಕ್ಲೀಯರ್ ಆಗಲು ಸುಮಾರು 12 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಅದಾದ ಬಳಿಕ ಅತಿದೊಡ್ಡ ಟ್ರಾಫಿಕ್ ಜಾಮ್ ಸಂಭವಿಸಿದ್ದು ಈಗಲೇ ಎನ್ನಲಾಗುತ್ತಿದೆ.

ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್

ಇನ್ನು ಮಹಾರಾಷ್ಟ್ರದಲ್ಲಿ ಸಾವಿರಾರು ಕಾರುಗಳು ಒಂದು ಒಂದು ಇಂಚು ಕೂಡ ಮೂವ್ ಆಗದ ಮಟ್ಟಕ್ಕೆ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿವೆ. ಮಧ್ಯಪ್ರದೇಶದ ಅನೇಕ ಜಿಲ್ಲೆಗಳು ಕತ್ನಿ, ಮಲ್ಹಾರ್​, ಮತ್ತು ರೇವಾ ಜಿಲ್ಲೆಗಳಲ್ಲಿ ಟ್ರಾಫಿಕ್ ಜಾಮ್ ಸುಮಾರು 200 ಕಿಲೋ ಮೀಟರ್​ನಿಂದ 300 ಕಿಲೋ ಮೀಟರ್​ ವರೆಗೂ ಹಬ್ಬಿದೆ. ಸುಮಾರು 48 ಗಂಟೆಗಳ ಕಾಲದಿಂದ ಟ್ರಾಫಿಕ್ ಹಾಗೆಯೇ ಇದೆ. ಇದು ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದು ಕೂಡ ಹೇಳಲಾಗುತ್ತಿದೆ.

Continue Reading

LATEST NEWS

ಗೃಹಲಕ್ಷ್ಮಿ ಹಣ 2,000ದಿಂದ 3,000ಕ್ಕೆ ಏರಿಕೆ ಆಗುವ ಸಾಧ್ಯತೆ..!?

Published

on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಈ ವರೆಗೆ ತಿಂಗಳಿಗೆ 2000 ರೂಪಾಯಿ ಬರುತ್ತಿತ್ತು. ಆದರೆ ಇನ್ನು ಮುಂದಕ್ಕೆ 2000 ದಿಂದ 3000 ಕ್ಕೆ ಏರಿಕೆ ಆಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ.

ಹೌದು.. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ ಗೃಹಲಕ್ಷ್ಮೀ ಯೋಜನೆಯೂ ಒಂದು. ಈ ಯೋಜನೆಯ ಮುಕೇನ ಬಡತನ ರೇಖೆಗಿಂತ ಕಡಿಮೆ ಇರುವ ಪ್ರತಿ ಮನೆಯ ಯಜಮಾನಿಗೆ ಈ ಹಣ ಬರುತ್ತದೆ.

ಹೌದು, ಬಿಜೆಪಿ & ಜೆಡಿಎಸ್‌ ನಾಯಕರು ಕಾಂಗ್ರೆಸ್‌ ನಾಯಕರ ವಿರುದ್ಧ ಗ್ಯಾರಂಟಿ ಯೋಜನೆಗಳನ್ನೇ ಮುಂದೆ ಇಟ್ಟುಕೊಂಡು ವಾದ-ವಿವಾದ ಮಾಡುತ್ತಿದ್ದಾರೆ. ಈ ಸಮಯದಲ್ಲೇ ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಸರ್ಕಾರ ಈ ಕುರಿತು ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page