Connect with us

ಫೋಟೋ ತೆಗೆದು ಮರ್ಯಾದೆ ತೆಗೆಯುವುದಕ್ಕಿಂತ ಅವರು ಹಸಿವೆಯಲ್ಲೇ ಒದ್ದಾಡಲಿ ಬಿಡಿ.!

Published

on

ಫೋಟೋ ತೆಗೆದು ಮರ್ಯಾದೆ ತೆಗೆಯುವುದಕ್ಕಿಂತ ಅವರು ಹಸಿವೆಯಲ್ಲೇ ಒದ್ದಾಡಲಿ ಬಿಡಿ.!

ಮಹಾಮಾರಿ ಕೊರೊನಾ ಬಂದ ಮೇಲಂತೂ ಜನಜೀವನ ಚೆಲ್ಲಾಪಿಲ್ಲಿಯಾಗಿದೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಕಾಲ.

ಇಂತಹ ಸಮಯದಲ್ಲಿ ಕೆಲವರು ಸಹಾಯಹಸ್ತ ಚಾಚುವ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ತಮ್ಮ-ತಮ್ಮ ಪ್ರಚಾರದ ಗೀಳಿಗೆ ಬಡಪಾಯಿಗಳನ್ನು ಬಲಿಯಾಗಿಸುತ್ತಿದ್ದಾರೆ.

ಕೊಡೋದು ಜುಜಿಬಿ ಒಂದು ಕೆ.ಜಿ ಅಕ್ಕಿಯಾದರೂ ಹಂಚೋದು ಮಾತ್ರ ನೂರಾರು ವಾಟ್ಸಾಪ್ ಫೇಸ್ ಬುಕ್ ಗ್ರೂಪುಗಳಿಗೆ.

 

ಹಸಿವೆಯಿಂದ ಚುರುಗುಟ್ಟುತ್ತಿದ್ದ ಹೊಟ್ಟೆ ಹೊತ್ತುಕೊಂಡು ವಿಲವಿಲನೆ ಒದ್ದಾಡುತ್ತಿದ್ದ ಆ ಮನಸ್ಸು ಒಂದು ದಿನ ತಿಂದುಡು ಮಲಗಿ ಎದ್ದಾಗ ಬೆಳಗಾಗೊದ್ರೊಳಗೆ ಪಕ್ಕದ ಮನೆಯವರು ನಿಮಗೆ ಯಾರೋ ಅಕ್ಕಿ-ಬೇಳೆ-ಕಾಳು ನೀಡಿದ್ದಾರಲ್ವಾ.?.

ವಾಟ್ಸಾಪ್ ನಲ್ಲಿ ಪೋಟೋ ನೋಡಿದೆ ಅಂತ ಅಂದಾಗ, ಮೊದಲೇ ನೊಂದ ಆ ಮನಸ್ಸುಗಳಿಗೆ ಮತ್ತೆಷ್ಟು ಘಾಸಿಯಾಗಬೇಡ.

ಅವರ್ಯಾರೋ ಕೊಟ್ಟು ಹೋದ ಸಾಮಾಗ್ರಿ ಒಂದು ದಿನಕ್ಕೋ ಒಂದು ವಾರಕ್ಕೋ ಖಾಲಿಯಾಗಬಹುದು. ಆದ್ರೆ ಸುತ್ತಮುತ್ತಲಿನವರ ಗೇಲಿಮಾತು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರ ಅದೆಷ್ಟೋ ದಿನ ಚುಚ್ಚುತ್ತಿರುತ್ತೇ ಅಲ್ವಾ.?.

ಹೌದು.. ಕೊರೊನಾ ವೈರಸ್ ಎಂಬ ಮಹಾಮಾರಿ ದಿನ ಕಳೆಯುತ್ತಿದ್ದಂತೆ ಭೀಕರ ರೂಪ ಪಡೆಯುತ್ತಿದೆ.

ಬದುಕಿ ಉಳಿದರೆ ನಾಳೆ ಏನಾದರೂ ಮಾಡಬಹುದು. ಆದರೆ, ದೇಶದ ಆರ್ಥಿಕತೆಗಾಗಿ ಭಾರತೀಯರನ್ನು ಬಲಿ ಕೊಡಲಾರೆ ಎಂದು ಖುದ್ದು ಪ್ರಧಾನಿಯೇ ಕಠಿಣ ನಿರ್ಧಾರ ತೆಗೆದುಕೊಂಡು ಇಡೀ ದೇಶಕ್ಕೆ ಲಾಕ್ ಹಾಕಿ ಬಿಟ್ಟರು.

ಇದು ಕೆಲವರಿಗೆ ಮಜಾ ಮಾಡುವ ಸಮಯವಾದ್ರೆ, ಇನ್ನು ಕೆಲವರಿಗೆ ಈ ದಿನಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿತ್ತು. ಕೆಲಸವಿಲ್ಲ, ಹಣವಿಲ್ಲ ಜೊತೆಯಿದ್ದಿದ್ದು ಕೇವಲ ಕಣ್ಣೀರು ಮಾತ್ರ….

ಕಷ್ಟಪಟ್ಟು ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಬಡಜೀವಗಳು ಸ್ವಾಭಿಮಾನಿಗಳೇ ಅಲ್ವಾ. ಭಿಕ್ಷಂದೇಹಿ ಅಂತ ಮನೆ ಮನೆ ಸುತ್ತಾಡಲು ಸಾಧ್ಯವಿಲ್ಲ ಅಲ್ಲವೇ.

ಯಾಕೆಂದರೆ ಅವರೆಲ್ಲಾ ಭಿಕ್ಷುಕರಲ್ಲ ಸ್ವಾಭಿಮಾನಿಗಳು. ಆದ್ರೆ ಈಗಿನ ಪರಿಸ್ಥಿತಿ ಒಪ್ಪೊತ್ತಿನ ಊಟಕ್ಕೆ ಸಂಕಟ ಪಡುವಂತೆ ಮಾಡಿದೆ.

ದೇವರು ನೀಡಿದ ಕೈಕಾಲುಗಳು ಬಲಿಷ್ಠವಾಗಿ ದುಡಿಯಲು ಸಮರ್ಥವಾಗಿದ್ರೂ ಭಾರತ ಲಾಕ್ ಡೌನ್ ಆಗಿ ಕೆಲಸವಿಲ್ಲ, ಇದೇ ಒಂದು ಕಾರಣ ಈ ಎಲ್ಲಾ ಅವಾಂತರಕ್ಕೆ ಕಾರಣ.

ಇವರೆಲ್ಲರ ಕಷ್ಟಗಳನ್ನು ಕಂಡು ಕೆಲವೊಂದಿಷ್ಟು ಮಂದಿ ನಿಸ್ವಾರ್ಥಿಗಳಾಗಿ ಯಾವ ಪ್ರಚಾರವನ್ನೂ ಬಯಸದೆ ದಾನ ಮಾಡಲು ಆರಂಭಿಸಿದ್ರೆ,

ಇದನ್ನು ಗಮನಿಸಿದ ಕೆಲವೊಂದಿಷ್ಟು ಶೋಕಿವಾಲಗಳು ತಾವೇನು ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳಲು ದಾನದ ಹೆಸರಿನಲ್ಲಿ ಪ್ರಚಾರ ಬಯಸಿದರು.

ನೀಡಿದ ಒಂದು ಕೆ.ಜಿ.ಅಕ್ಕಿಗೆ ಹತ್ತು ಫೊಟೋ ಕ್ಲಿಕ್ಕಿಸಿಕೊಂಡರು. ಆ ಅಕ್ಕಿಯನ್ನು ಪಡೆದು ತಿಂದುಂಡು ಮಲಗಿತು ಕುಟುಂಬ.

ಆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿರುವಾಗ ಪಡೆದುಕೊಂಡ ಕುಟುಂಬ ಮತ್ತೆ ಹಸಿವಲ್ಲಿ ಒದ್ದಾಡುತ್ತಿತ್ತು.

ಇನ್ನು ಈ ಬಗ್ಗೆ ಟಿಕ್ ಟಾಕ್ ಕೂಡ ಬಂದಿದೆ. ಮನೆಯಲ್ಲಿ ತಿನ್ನಲೂ ಏನೂ ಉಳಿದಿಲ್ಲವಾದರೂ ಅವರ ಪ್ರಚಾರದ ಗೀಳಿಗೆ ಸಿಕ್ಕಿ ಬಲಿಯಾಗದಿರುವುದೇ ಉತ್ತಮ.

ಅಷ್ಟೇ ಅಲ್ಲದೇ ಕಿಟ್ ನೀಡುವಾಗ ಫೋಟೋ ತೆಗೆಯುವುದನ್ನು ಈಗಾಗಲೇ ರಾಜಸ್ಥಾನ ಬ್ಯಾನ್ ಮಾಡಿದೆ. ಅದು ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕಿದೆ.

ಇತ್ತೀಚೆಗೆ ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು ನಿಲ್ಲಿಸಿ ತೆಗೆದ ಫೊಟೋ ಭಾರೀ ವೈರಲ್ ಆಗಿತ್ತು.

ಅದರ ಜೊತೆಗೆ ಆಕೆಯ ಮಾನ ಮರ್ಯಾದೆಯೂ ಹರಾಜಾಗಿತ್ತು. ಹಾಗಾಗಿ ಸಹಾಯ ಹಸ್ತ ಚಾಚುವ ನಿಮ್ಮೆಲ್ಲರಿಗೆ ಹೇಳುವುದೇನೆಂದರೆ, ‘ನೀವು ತೆಗೆದ ಆ ಒಂದು ಫೊಟೋ ಇಡೀ ಕುಟುಂಬದ ಸಾವಿಗೆ ಕಾರಣವಾಗಬಹುದು’.

‘ಮಾನ ಮರ್ಯಾದೆ ತೆಗೆದು ನೀವುಗಳೇ ಈ ರೀತಿ ಕೊಲೆ ಮಾಡುವುದಕ್ಕಿಂತ, ಅವರು ಹಸಿವೆಯಲ್ಲೇ ಒದ್ದಾಡಿ ಸ್ವಾಭಿಮಾನಿಗಳಾಗಿಯೇ ಸಾಯಲಿ ಬಿಡಿ…

Advertisement
Click to comment

Leave a Reply

Your email address will not be published. Required fields are marked *

FILM

ಮಂಗಳೂರಿನಲ್ಲಿಯೂ ಆಫ್ರೋ ಟಪಾಂಗ್ ಹವಾ; ಪ್ರಮೋಷನ್‌ಗಾಗಿ ಆಗಮಿಸಿದ ಚಿತ್ರತಂಡ

Published

on

ಮಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ ‘45’.  ಈ ಸಿನಿಮಾದ ಆಫ್ರೋ ಟಪಾಂಗ್ ಹಾಡು ಭಾರೀ ಸದ್ದು ಮಾಡುತ್ತಿದ್ದು, ಇದೀಗ ಈ ಹಾಡಿನ  ಪ್ರಮೋಷನ್ ಗಾಗಿ ಆಗಮಿಸಿದ್ದ ಚಿತ್ರತಂಡ ಮಂಗಳೂರಿನ ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ. ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ನಿರೂಪಕಿ ಅನುಶ್ರೀ ಶೆಟ್ಟಿ ಸಾಥ್ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಳಿಸಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಮತ್ತಷ್ಟು ಮನರಂಜಿಸಿದರು. ಜೊತೆಗೆ ಆ್ಯಂಕರ್ ಅನುಶ್ರಿ ಅವರ ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಿಕ್ ನೀಡಿತು.

ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ, ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ರೀಲ್ಸ್ ಮೂಲಕವೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದ ಉಗಾಂಡಾ ದೇಶದ ಹಳ್ಳಿಯ ಮಕ್ಕಳ ತಂಡ ‘ಗೆಟ್ಟೋ ಕಿಡ್ಸ್’ ಅನ್ನು 45 ಸಿನಿಮಾದ ಟಪಾಂಗ್ ಹಾಡಿನಲ್ಲಿ ಕುಣಿಸಿರುವುದು ಸಿನಿಮಾದ ವಿಶೇಷವಾಗಿದೆ. ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು.

ನಟ ರಾಜ್ ಬಿ ಶೆಟ್ಟಿ ಮಾತನಾಡಿ, 45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಅವರೊಂದಿಗೆ ನಟಿಸಿರುವುದು ರೋಮಾಂಚನಕಾರಿ ಅನುಭವ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಆಫ್ರೋ ಟಪಾಂಗ್ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ತುಳುವರು ಸಿನಿಮಾ ನೋಡಿ ಎಂದರು.

ಫೋರಂ ಫಿಜಾ ಮಾಲ್‌ನ ಬಿ.ಎಂ.ಫಾರೂಕ್ ಚಿತ್ರತಂಡದ ಕಲಾವಿದರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿ, ಚಿತ್ರತಂಡ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದೆ. ತುಳು ಸಾಹಿತ್ಯವನ್ನು ಹಾಡಿನಲ್ಲಿ ಬಳಕೆ ಮಾಡಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.

ಇದನ್ನೂ ಓದಿ : ಪ್ರೀಮಿಯರ್ ಶೋ ನೋಡಿ ‘ಜೈ’ ಅಂದ್ರು ಪ್ರೇಕ್ಷಕರು

ಅನುಶ್ರೀ  ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಜನ ಉಪಸ್ಥಿತರಿದ್ದು ಕಾರ್ಯಕ್ರಮ ವೀಕ್ಷಿಸಿದರು.

Continue Reading

FILM

ಪ್ರೀಮಿಯರ್ ಶೋ ನೋಡಿ ‘ಜೈ’ ಅಂದ್ರು ಪ್ರೇಕ್ಷಕರು

Published

on

ಮಂಗಳೂರು : ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ ಹೊಸ ತುಳು ಚಲನ ಚಿತ್ರ ‘ಜೈ’ ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಅದರ ಪ್ರೀಮಿಯರ್ ಶೋ ಇಂದು(ನ.09) ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ ಭರ್ಜರಿಯಾಗಿ ನಡೆಯಿತು.  ನಟ ರಾಜ್ ದೀಪಕ್ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಪ್ರೀಮಿಯರ್ ಶೋ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

ಬಿಗ್ ಬಜೆಟ್‌ನ ಈ ಚಿತ್ರ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್, ಟ್ರೇಲರ್ ಎಲ್ಲವೂ  ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಅಂದಹಾಗೆ, ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸಿರೋದು ಪ್ರಮುಖ ಆಕರ್ಷಣೆ.

ಗಿರಿಗಿಟ್, ಗಮ್ಜಾಲ್ ಮತ್ತು ಸರ್ಕಸ್ ಚಿತ್ರದ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ‘ಜೈ’ ಎಂಬ ಮಹತ್ವಾಕಾಂಕ್ಷೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.  ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ಹಾಗೂ ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಆ್ಯಕ್ಷನ್, ಡ್ರಾಮಾ ಮತ್ತು ಎಮೋಷನ್‌ಗಳ ಸಮನ್ವಯವಿದೆ. ರೂಪೇಶ್ ಶೆಟ್ಟಿಗೆ  ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೊತೆಯಾಗಿದ್ದಾರೆ.

ಚಿತ್ರದ ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ಅವರು ಬರೆದಿದ್ದಾರೆ. ಕ್ಯಾಮೆರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ್ಹಾ, ಸಂಕಲನ ರಾಹುಲ್ ವಸಿಷ್ಠ ಅವರದ್ದು ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ : ಉರ್ವ ಮಾರಿಯಮ್ಮ ಕ್ಷೇತ್ರ : ಡಿ.25 ಮತ್ತು 26 ರಂದು ನವಾಕ್ಷರಿ ಮಹಾಮಂತ್ರ ಯಾಗ

ನವೆಂಬರ್ 14 ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಜೈ’ ಚಲನ ಚಿತ್ರದ  ಪ್ರಿಮಿಯರ್ ಶೋ ಈಗಾಗಲೇ ಹಲವಾರು ಕಡೆ ನೆರವೇರಿದೆ. ಮಂಗಳೂರಿನಲ್ಲಿ ಇಂದು(ನ.09) ನೆರವೇರಿದ್ದು, ಚಿತ್ರ  ನೋಡಿದ ಪ್ರೇಕ್ಷಕರು ಜೈ ಎಂದಿದ್ದಾರೆ.

 

 

Continue Reading

BIG BOSS

ನಿಶ್ಚಿತಾರ್ಥ ಮಾಡಿಕೊಂಡ BBK11ರ ಸ್ಪರ್ಧಿ ಉಗ್ರಂ ಮಂಜು

Published

on

ಬಿಗ್‌ ಬಾಸ್‌ ಕನ್ನಡ ಸೀಸನ್ 11ರ ಸ್ಪರ್ಧಿ, ನಟ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಮಂಜು ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ.

ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ’ ಬರೆದುಕೊಂಡಿದ್ದಾರೆ.

ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ.

ಇದನ್ನೂ ಓದಿ: 20 ವರ್ಷದ ಯುವತಿ ವಿರುದ್ದ ಕೇಸ್ ದಾಖಲಿಸಿದ ಖ್ಯಾತ ನಟಿ ಅನುಪಮಾ ಪರಮೇಶ್ವರನ್‌; ಪೋಸ್ಟ್‌ನಲ್ಲೇನಿದೆ?

ಹುಡುಗಿ ಯಾರು?
ಉಗ್ರಂ ಮಂಜು ಕೈಹಿಡಿಯಲಿರುವ ಸಂಧ್ಯಾ ಖುಷಿ ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲ್ಯಾಂಟ್ ಕೋರ್ಡಿನೇಟರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಬಹಳ ಸಕ್ರಿಯವಾಗಿರುವ ಸಂಧ್ಯಾ ಅವರು ತಮ್ಮ ಹಲವಾರು ವಿಡಿಯೋಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page