Connect with us

LATEST NEWS

ಒಡೆಯನನ್ನು ಹಾವಿನಿಂದ ಬಚಾವ್‌ ಮಾಡಿದ ಸಾಕು ನಾಯಿ.!

Published

on

ಮಂಗಳೂರು: ನಾಯಿಗೆ ಇರುವಷ್ಟು ನಿಯತ್ತು ಬಹುಶಃ ಯಾವುದೇ ಪ್ರಾಣಿಗಳಲ್ಲೂ ಇಲ್ಲ ಅನ್ನೋ ಮಾತು ಸಾಕಷ್ಟು ಬಾರಿ ರುಜುವಾತಾಗಿದೆ. ಇದೀಗ ಚಿತ್ರದುರ್ಗದ ಗ್ರಾಮವೊಂದರಲ್ಲಿ ಯಜಮಾನನ ಪ್ರಾಣ ಕಾಪಾಡುವ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಎಂಬಲ್ಲಿ ಈ ಘಟನೆ ನಡೆದಿದ್ದು ಜನರು ನಾಯಿಯ ನಿಯತ್ತಿಗೆ ಶರುಣು ಎಂದಿದ್ದಾರೆ. ಪ್ರಗತಿಪರ ರೈತ ಡಾ. ಆರ್.ಎ.ದಯಾನಂದ ಮೂರ್ತಿ ಎಂಬವರನ್ನು ಅವರ ಸಾಕು ನಾಯಿ ನಾಗರ ಹಾವಿನಿಂದ ರಕ್ಷಣೆ ಮಾಡಿದೆ.

snake attack

ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!

ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ದಯಾನಂದ ಮೂರ್ತಿ ಅವರು ವಿಶ್ರಾಂತಿಗೆ ಅಂತ ಮಾವಿನ ಮರಕ್ಕೆ ಒರಗಿಕೊಂಡು ಮಲಗಿದ್ದಾರೆ. ಈ ವೇಳೆ ಮರದ ಇನ್ನೊಂದು ಪಕ್ಕದಲ್ಲಿದ್ದ ನಾಗರಹಾವು ಇವರನ್ನು ಗಮನಿಸಿ ಹೆಡೆಯೆತ್ತಿ ನಿಂತಿದೆ. ಆದ್ರೆ ನಾಗರ ಹಾವು ತನ್ನ ಹಿಂದೆ ಇದೆ ಅನ್ನೋ ವಿಚಾರ ದಯಾನಂದ ಮೂರ್ತಿ ಅವರ ಗಮನಕ್ಕೆ ಬಂದಿರಲಿಲ್ಲ. ಇದೇ ವೇಳೆ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಹಾವನ್ನು ಗಮನಿಸಿದೆ. ತಕ್ಷಣ ಬೊಗಳುತ್ತಾ ಇನ್ನೊಂದು ಬದಿಗೆ ಹಾವಿನ ಗಮನವನ್ನು ಸೆಳೆದಿದೆ. ನಾಯಿ ಯಾಕೆ ಹೀಗೆ ತನ್ನ ಹಿಂದಿನಿಂದ ಬೊಗಳುತ್ತಿದೆ ಅಂತ ಗಮನಿಸಿದ ರೈತನಿಗೆ ತನ್ನ ಹಿಂದೆ ಇದ್ದ ದೊಡ್ಡ ನಾಗರ ಹಾವು ಕಾಣಿಸಿದೆ. ತಕ್ಷಣ ಅಲ್ಲಿಂದ ಎದ್ದು ದೂರು ಹೋದ ರೈತ ದಯಾನಂದ ಮೂರ್ತಿ ಬಳಿಕ ಹಾವನ್ನು ತೋಟದಿಂದ ದೂರ ಓಡಿಸಿದ್ದಾರೆ. ಸಾಕು ನಾಯಿ ತೋರಿದ ನಿಯತ್ತಿನಿಂದಾಗಿ ನಾಗರ ಹಾವು ಕಚ್ಚುವುದರಿಂದ ದಯಾನಂದ ಮೂರ್ತಿ ಅವರು ಬಚಾವ್ ಆಗಿದ್ದಾರೆ. ಇದೀಗ ಈ ವಿಚಾರ ಸಾಕಷ್ಟು ಸುದ್ದಿಯಾಗಿದ್ದು, ನಾಯಿಯ ನಿಯತ್ತನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

LATEST NEWS

‘ನಿಜಕ್ಕೂ ನೀವು ಸಂತೋಷವಾಗಿದ್ದೀರಾ ..?’ ; ಸ್ವಾಮೀಜಿ ಪ್ರಶ್ನೆಗೆ ಕೊಹ್ಲಿ ಹೇಳಿದ್ದೇನು ಗೊತ್ತಾ ..?

Published

on

VIRAL : ಭಾರತೀಯರ ನೆಚ್ಚಿನ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಈ ಬಾರಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಬಳಿಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ತಾವು ಆರಾಧಿಸುವಂತಹ ಪ್ರೇಮಾನಂದ ಮಹಾರಾಜ್ ಸ್ವಾಮೀಜಿಯ ವಾಸಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರೇಮಾನಂದ ಮಹಾರಾಜರು ವಿರಾಟ್ ಕೊಹ್ಲಿಗೆ ‘ನಿಜಕ್ಕೂ ನೀವು ಸಂತೋಷವಾಗಿದ್ದೀರಾ..? ಎಂದು ಕೇಳಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ ಅಚ್ಚರಿಯ ಉತ್ತರ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದಾಗ, ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಆಶೀರ್ವಾದ ಪಡೆದ ನಂತರ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಕೊಹ್ಲಿ ಭಾರತವನ್ನು ಚಾಂಪಿಯನ್ ಮಾಡಿದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದ್ದರು. ಈಗ ಮತ್ತೊಮ್ಮೆ ಕೊಹ್ಲಿ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದು, ಕೊಹ್ಲಿ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ : ‘ಆಪರೇಷನ್‌ ಸಿಂದೂರ್’ ನಂತರದ ಮುಂದಿನ ಕ್ರಮದ ಕುರಿತು ಇಂದು ಮಹತ್ವದ ಸಭೆ

ಕೊಹ್ಲಿ ಸ್ವಾಮೀಜಿಯನ್ನು ಭೇಟಿಯಾದ ಸಂದರ್ಭ, ಮಹಾರಾಜ್ ಜಿ ಕೊಹ್ಲಿ ಬಳಿ ‘ನಿಜಕ್ಕೂ ನೀವು ಸಂತೋಷವಾಗಿದ್ದೀರಾ..?’ ಎಂದು ಕೇಳಿದರು. ಅದಕ್ಕೆ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಕೊಹ್ಲಿ. ಕೊಹ್ಲಿ ದಂಪತಿ ಜೊತೆ ಸ್ವಾಮೀಜಿ  ಬಹಳ ಹೊತ್ತು ಮಾತನಾಡಿದ್ದಾರೆ. ಇನ್ನು ಮಹಾರಾಜ್ ಜೀ ಹೇಳುತ್ತಿರುವುದನ್ನು ಕೊಹ್ಲಿ ಗಮನವಿಟ್ಟು ಕೇಳುತ್ತಿದ್ದರು. ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾದ ನಂತರ ಕೊಹ್ಲಿ ಮತ್ತು ಅನುಷ್ಕಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಇಬ್ಬರ ಮುಖದಲ್ಲೂ ತೃಪ್ತಿಯ ಭಾವ ಸ್ಪಷ್ಟವಾಗಿ ಕಾಣುತ್ತಿತ್ತು.

Continue Reading

LATEST NEWS

ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಪೋ*ಟ, ಐವರಿಗೆ ಗಂ*ಭೀರ ಗಾಯ

Published

on

ಉಡುಪಿ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಮಲ್ಪೆ ಬಂದರಿನಲ್ಲಿ ಮಂಗಳವಾರ ಸಂಜೆ ಬಾಂಬ್ ಸ್ಫೋ*ಟಗೊಂಡು, ಐವರು ಗಂ*ಭೀರ ಗಾಯಗೊಂಡಿದ್ದಾರೆ.

ನಿನ್ನೆ (ಮೇ.13) ಸಂಜೆ ಸುಮಾರು 4.30ಕ್ಕೆ ಬಂದರಿನಲ್ಲಿ ಒಮ್ಮೇಲೆ ದೊಡ್ಡ ಸದ್ದಿನೊಂದಿಗೆ ಬೆಂ*ಕಿ ಕಾಣಿಸಿಕೊಂಡಿತು. ಜನರು ಗಾಬರಿಯಿಂದ ಅಲ್ಲಿಂದ ಓಡಲಾರಂಭಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂ*ಕಿಯನ್ನು ಹತೋಟಿಗೆ ತಂದು ನಂದಿಸಿದ್ದಾರೆ. ಗಾಯಗೊಂಡ ಐವರು ಮೀನುಗಾರರನ್ನು ತಕ್ಷಣ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಅಷ್ಟಕ್ಕೂ ಇದು ನಿಜ ಘಟನೆ ಅಲ್ಲ. ಸಂಭಾವ್ಯ ಆತಂಕದ ಹಿನ್ನೆಲೆಯಲ್ಲಿ ನಡೆದ ಅಣಕು ಪ್ರದರ್ಶನವಷ್ಟೆ.

ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಅಗ್ನಿಶಾಮಕ ದಳ, ಕಸ್ಟಮ್ಸ್ ವತಿಯಿಂದ ಜಂಟಿಯಾಗಿ ಮಲ್ಪೆ ಬಂದರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್, ಅಧಿಕಾರಿಗಳು ಹಾಗೂ ಬಂದರಿನಲ್ಲಿ ನೂರಾರು ಮೀನುಗಾರರಿಗೆ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು.
ಜೊತೆಗೆ ಕರಾವಳಿ ಕಾವಲು ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿಗಳು ಬೋಟ್‌ನಲ್ಲಿ ಬಂದರಿನ ಸುತ್ತಲೂ ಗಸ್ತು ತಿರುಗುವ ಮೂಲಕ ವಿಶೇಷ ಸನ್ನಿವೇಶದಲ್ಲಿ ಇಲಾಖೆಯ ಕಾರ್ಯದ ಬಗ್ಗೆ ಅರಿವು ಮೂಡಿಸಿದರು. ಕರಾವಳಿ ಕಾವಲು ಪಡೆಯ ಪೋಲಿಸ್ ನಿರೀಕ್ಷಕರಾದ ಪ್ರಮೋದ್, ಸೀತರಾಮ್, ಪಿಎಸ್ಐ ಫೆಮಿನಾ ಸೇರಿದಂತೆ ಮೊದಲಾದ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ: ಆದಂಪುರ್‌ ವಾಯುನೆಲೆಯಲ್ಲಿ ಪ್ರಧಾನಿ ಮೋದಿ

ಕರ್ನಾಟಕದ 12 ಪ್ರಮುಖ ಬಂದರಿನಲ್ಲಿ ಮಲ್ಪೆ ಬಂದರು ಪ್ರಮುಖವಾಗಿದೆ. ಅತೀ ಹೆಚ್ಚು ಮೀನುಗಾರಿಕಾ ಚಟುವಟಿಕೆ ನಡೆಯುವ ಬಂದರು ಇದಾಗಿದ್ದು, ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅಣಕು ಕಾರ್ಯಾಚರಣೆಯನ್ನು ನೀಡಲಾಗಿದೆ. ಮೀನುಗಾರರು 3 ಬೋಟ್‌ಗಳು ಒಟ್ಟಿಗೆ ಮೀನುಗಾರಿಕೆ ತೆರಳಬೇಕು. ಸೂಕ್ಷ್ಮ ಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳುವಾಗ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್ ಹೇಳಿದ್ದಾರೆ.

Continue Reading

LATEST NEWS

‘ಆಪರೇಷನ್‌ ಸಿಂದೂರ್’ ನಂತರದ ಮುಂದಿನ ಕ್ರಮದ ಕುರಿತು ಇಂದು ಮಹತ್ವದ ಸಭೆ

Published

on

ಮಂಗಳೂರು/ನವದೆಹಲಿ : ಉಗ್ರರಿಗ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈಗಾಗಲೇ ‘ಆಪರೇಶನ್ ಸಿಂಧೂರ್’ ಆರಂಭವಾಗಿದೆ. ಆದರೆ ಇದರ ಮುಂದಿನ ಕ್ರಮ ಏನು ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಹಿನ್ನಲೆಯಲ್ಲಿಇಂದು (ಮೇ.14) ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಉನ್ನತ ಮಟ್ಟದ ಚರ್ಚೆಗಳು ನಡೆಯಲಿದೆ.

ಮೋದಿಯವರು ಭದ್ರತೆ ಕುರಿತ ಸಂಪುಟ ಸಮಿತಿಯ (CCS) ನಿರ್ಣಾಯಕ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ‘ಆಪರೇಷನ್ ಸಿಂದೂರ್’ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಘಟನೆಗಳನ್ನು ಚರ್ಚಿಸುವ ಜತೆಗೆ, ಪಾಕಿಸ್ತಾನದ ವಿರುದ್ಧ ಕಾರ್ಯತಂತ್ರದ ಪ್ರತಿಕ್ರಿಯೆಯನ್ನು ರೂಪಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ‘ವ್ಯಾಪಾರ ರಿಯಾಯಿತಿ ಬದಲು ಕದನ ವಿರಾಮಕ್ಕೆ ಸಹಾಯ ಮಾಡಿದ್ದೇನೆ…’ : ಟ್ರಂಪ್ ಹೇಳಿಕೆಯನ್ನು ವಿರೋಧಿಸಿದ ಭಾರತ

‘ಆಪರೇಷನ್‌ ಸಿಂದೂರ್’ ನಂತರ ಭಾರತವು ತನ್ನ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತಿರುವಾಗ ಇಂದಿನ ಸಭೆಯು ಮಹತ್ವದ್ದಾಗಿದೆ. ರಕ್ಷಣ, ಗೃಹ, ವಿದೇಶಾಂಗ ಮತ್ತು ಗುಪ್ತಚರ ಸಂಸ್ಥೆಗಳ ಪ್ರಮುಖ ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನೊಳಗೊಂಡ ಸಿಸಿಎಸ್‌ ಸಭೆಯು, ಮಿಲಿಟರಿ ಮತ್ತು ಗುಪ್ತಚರ ವಲಯದಲ್ಲಿ ಭಾರತದ ಸನ್ನದ್ಧತೆಯ ಕುರಿತು ಚರ್ಚಿಸಲಾಗುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page