Connect with us

DAKSHINA KANNADA

ಕೈಗೆ ಮೇಜರ್ ಸರ್ಜರಿ ಮಾಡಿದ ಹೈಕಮಾಂಡ್..! ಕೆಪಿಸಿಸಿಗೆ 40 ಜನ ಉಪಾಧ್ಯಕ್ಷರು, 109 ಪ್ರಧಾನ ಕಾರ್ಯದರ್ಶಿಗಳ ನೇಮಕ..!

Published

on

ಬೆಂಗಳೂರು :ಕಳೆದ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿ ಪಟ್ಟಿಗೆ ಕೊನೆಗೂ ಕಾಂಗ್ರೆಸ್‌ ಹೈಕಮಾಂಡ್‌ ಅಂಕಿತ ಹಾಕಿದ್ದು, ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದೆ.

ಎಐಸಿಸಿಯಿಂದ ಕಾಂಗ್ರೆಸ್‌ ಪದಾಧಿಕಾರಿಗಳ ಪಟ್ಟಿ ಪ್ರಕಟವಾಗಿದ್ದು, ಮೊದಲ ಹಂತದಲ್ಲಿ ಉದ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ 40 ಜನರಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ, 109 ಜನರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.

ಉಪಾಧ್ಯಕ್ಷರುಗಳ ಪಟ್ಟಿ:

ಅಭಯಚಂದ್ರ ಜೈನ್, ಪಿ.ಎಂ. ಅಶೋಕ್, ಬಿ.ಎನ್. ಚಂದ್ರಪ್ಪ, ಬಸವರಾಜ ರಾಯರಡ್ಡಿ, ಡಿ.ಆರ್. ಪಾಟೀಲ, ಡೇವಿಡ್ ಸಿಮಿಯೋನ್, ಬಿ.ಎಲ್.ಶಂಕರ್, ಡಾ. ಎಲ್.ಹನುಮಂತಯ್ಯ, ಡಾ. ಶರಣಪ್ರಕಾಶ ಪಾಟೀಲ, ಜಿ.ಪದ್ಮಾವತಿ, ಜಿ.ಟಿ. ಚಂದ್ರಶೇಖರ್, ಎಚ್.ಆಂಜನೇಯ, ಎಚ್.ಎಂ. ರೇವಣ್ಣ, ಹಸನ್‌ಸಾಬ್  ದೋಟಿಹಾಳ, ಐವಾನ್ ಡಿಸೋಜಾ, ಕೆ.ಎನ್. ರಾಜಣ್ಣ, ಎಂ.ಸಿ. ವೇಣಗೋಪಾಲ, ಎಂ.ಆರ್. ಸೀತಾರಾಂ, ಮಧು ಬಂಗಾರಪ್ಪ, ಮಲ್ಲಿಕಾರ್ಜುನ ನಾಗಪ್ಪ, ಮಂಜುನಾಥ ಭಂಡಾರಿ, ಎನ್.ಚಲುವರಾಯ ಸ್ವಾಮಿ, ನಾರಾಯಣ ಸ್ವಾಮಿ, ನರೇಂದ್ರ ಸ್ವಾಮಿ, ನಾಸಿರ್ ಹುಸೇನ್, ಪಿ.ಆರ್. ರಮೇಶ್, ಪಿ.ವಿ. ಮೋಹನ್, ಪ್ರಕಾಶ ಹುಕ್ಕೇರಿ, ಪ್ರಮೋದ್ ಮಧ್ವರಾಜ, ಆರ್.ಬಿ. ತಿಮ್ಮಾಪೂರ, ರಮಾನಾಥ ರೈ, ಎಸ್.ಇ. ಸುಧೀಂದ್ರ, ಸಂತೋಷ್ ಲಾಡ್, ಶರಣಪ್ಪ ಮಟ್ಟೂರ, ಶಿವರಾಮೇಗೌಡ, ಕೆ.ತಿಪ್ಪಣ್ಣಪ್ಪ, ವಿ.ಎಸ್. ಉಗ್ರಪ್ಪ, ವಿನಯ್ ಕುಲಕರ್ಣಿ, ವಿನಯಕುಮಾರ ಸೊರಕೆ.

ಪ್ರಧಾನ ಕಾರ್ಯದರ್ಶಿಗಳು:

ಎ.ಸಿ. ಶ್ರೀನಿವಾಸ್, ಗಜಾನನ ತಾರಿಸ್ಕರ್, ಆಘಾ ಸುಲ್ತಾನ್, ಅಕೈ ಪದ್ಮಶಾಲಿ, ಅಲ್ಕೋಡ್ ಹನುಮಂತಪ್ಪ, ಅನಿಲ್‌ಕುಮಾರ್ ಪಾಟೀಲ, ಅನಿಲ್‌ಕುಮಾರ್, ಅರುಣ್ ಮಾಚಯ್ಯ, ಬಿ.ಬಾಲರಾಜ್ ನಾಯ್ಕ, ಬಿ.ಬಿ. ರಾಮಸ್ವಾಮಿ ಗೌಡ, ಬಿ.ಟಿ. ಶ್ರೀನಿವಾಸಮೂರ್ತಿ, ಬಾಲರಾಜ್ ಬಸವನಗೌಡ ಬಾದರ್ಲಿ, ಭೀಮಣ್ಣ ನಾಯ್ಕ, ಬೃಜೇಶ್ ಕಾಳಪ್ಪ, ಪಿ.ಡಿ. ಗಂಗಾಧರ, ಚಂದ್ರಮೌಳಿ, ಡಿ.ಕೆ. ಮೋಹನ್, ದಯಾನಂದ ಪಾಟೀಲ, ದೀಪಕ್ ಪೂಜಾರಿ, ಎ.ಧನಂಜಯ, ಎಂ.ಎಚ್. ಚಲವಾದಿ, ಡಾ. ಸಾಸಲು ಸತೀಶ್, ಬಿ. ಗುರಪ್ಪ ನಾಯ್ಡು, ಡಾ.ಎಚ್.ಎನ್.  ರವೀಂದ್ರ, ಡಾ.ನಾಗಲಕ್ಷ್ಮೀ ಚೌಧರಿ, ಎಫ್.ಎಚ್. ಜಕ್ಕಪ್ಪನವರ, ಜಿ.ಎ. ಬಾವಾ, ಜಿ.ಶೇಖರ, ಗಾಯತ್ರಿ ಶಾಂತನಗೌಡ, ಗೀತಾರಾವ್ ಚಿದ್ರಿ, ಎಚ್.ಸಿದ್ದಯ್ಯ, ಎಚ್.ಕೆ. ಶ್ರೀಕಂಠು, ಹುಚ್ಚಪ್ಪ, ಇನಾಯತ್ ಅಲಿ, ಜೆ.ಎಂ. ಮಂಜುನಾಥ, ಜೆ.ಎಸ್. ಆಂಜನೇಯಲು, ಜಯಸಿಂಹ, ಕೆ. ಶಿವಮೂರ್ತಿ, ಕೆ.ಪಿ ಚಂದ್ರಕಲಾ, ಕೆ.ರತ್ನಾಕರ, ಕಮಲಾಕ್ಷಿ ರಾಜಣ್ಣ, ಕಾಂತಾ ನಾಯ್ಕ, ಕವಿತಾ ರೆಡ್ಡಿ, ಕೇಶವಮೂರ್ತಿ, ಕೃಷ್ಣಂ ರಾಜು, ಕೃಪಾ ಆಳ್ವಾ, ಲಕ್ಷ್ಮಣ, ಎಂ.ಡಿ. ಲಕ್ಷ್ಮೀನಾರಾಯಣ, ಲತಾ, ಎಂ.ಎ. ಗಫೂರ್, ಎಂ.ರಾಜಕುಮಾರ್, ಎಂ.ರಾಮಚಂದ್ರಪ್ಪ, ಎಂ.ರಾಮಪ್ಪ, ಎಂ.ಸುರೇಶ, ಎಂ.ಉದಯಶಂಕರ, ಮಹಾವೀರ ಲಕ್ಷ್ಮಣ ಮೋಹಿತೆ, ಮಲ್ಲಿಕಾರ್ಜುನ ಪಾಟೀಲ, ಮಮತಾ ಗಟ್ಟಿ, ಮಂಜುಳಾ ಮಾನಸ, ಮಂಜುಳಾ ನಾಯ್ಡು, ಮಂಜುಳಾ ರಾಜು, ಮಂಜುನಾಥ ರೆಡ್ಡಿ, ಮನ್ಸೂರ್ ಅಲಿ ಖಾನ್, ಮರಿಗೌಡ ಪಾಟೀಲ, ಮೀನಾಕ್ಷಿ ಸಂಗ್ರಾಮ್, ಮೆಹ್ರೋಜ್‌ ಖಾನ್, ಮಿಲಿಂದ್ ಧರ್ಮಸೇನಾ, ಮಿಥುನ್ ರೈ, ಮುನಿ ಶಾಮಣ್ಣ, ಮುರಳೀಧರ ಹಾಲಪ್ಪ, ಎನ್.ಸಂಪಂಗಿ, ನೈನಾ ಝವರ್, ನಿವೇದಿತ್ ಆಳ್ವಾ, ಪ್ಯಾರೇ ಜಾನ್, ಆರ್.ಮಂಜುನಾಥ, ಆರ್.ಎಸ್. ಸತ್ಯನಾರಾಯಣ, ಆರ್.ಬಿ. ವೆಂಕಟೇಶ, ರಫೀಕ್ ಅಹಮದ್, ರಾಜನಂದಿನಿ ಕಾಗೋಡು, ರಾಜಕುಮಾರ್, ರಕ್ಷಿತ್ ಶಿವರಾಮ್, ರಮಾನಂದ ಬಿ. ನಾಯ್ಕ, ರತ್ನಪ್ರಭಾ, ರುದ್ರಪ್ಪ ಲಮಾಣಿ, ಎಸ್. ಮನೋಹರ, ಎಸ್.ಎ. ಹುಸೇನ್, ಎಸ್.ಸಿ. ಬಸವರಾಜ್, ಎಸ್.ಪಿ. ಪ್ರಭಾಕರ ಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಸದಾನಂದ ಡಂಗನವರ, ಸಯೀದ್ ಅಹಮದ್, ಶಾರದಾ ಗೌಡ, ಶಾ ನಿಜಾಮುದ್ದಿನ್ ಅಲಿಯಾಸ್ ನಿಜಾಮ್, ಶಾಕಿರ್ ಸನದಿ, ಶರಣು ಮೋದಿ, ಪಿ.ಒ. ಶಿವಕುಮಾರ, ಶಿವಣ್ಣ ಮಳವಳ್ಳಿ, ಸುಜಾತಾ ದೊಡ್ಡಮನಿ, ಸಿರಾಜ್ ಶೇಖ್, ಸುನೀಲ್ ಜೆ. ಹನುಮಣ್ಣವರ, ಸುಷ್ಮಾ ರಾಜಗೋಪಾಲ, ಟಿ. ಈಶ್ವರ, ಎ. ವಸಂತಕುಮಾರ್, ವೀಣಾ ಕಾಶಪ್ಪನವರ್, ವೆಂಕಟರಾವ್ ಘೋರ್ಪಡೆ, ವಿಜಯ್ ಕೆ.ಮುಳಗುಂದ, ವಿಜಯ ಸಿಂಗ್, ವೈ.ಎನ್. ಗೌಡರ್.

DAKSHINA KANNADA

ಕಲ್ಲರ್ಪೆಯಲ್ಲಿ ಮತ್ತೊಂದು ಅಪಘಾತ; ಕಾರು ಬೈಕ್ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಗಂಭೀರ

Published

on

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಕಾರು ಬೈಕ್ ಮುಖಾಮುಖಿ ಡಿಕ್ಕಿಯೂ ಆ ಭಾಗದಲ್ಲಿನ ರಸ್ತೆ ಸುರಕ್ಷ ತಾ ಕ್ರಮಗಳ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಈ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿಯೂ ಇದೇ ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾಗಿತ್ತು. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ: ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸುವವರೇ ಎಚ್ಚರ; ಗದ್ದೆಗೆ ಬಿತ್ತು ಟಿಟಿ

ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಲರ್ಪೆ ವಲಯವು ಅಪಘಾತಗಳ ಕೇಂದ್ರಬಿಂದುವಾಗಿ ಪರಿವರ್ತನೆಯಾಗುತ್ತಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.

Continue Reading

DAKSHINA KANNADA

ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸಮಗ್ರ ತನಿಖೆ ನಡೆಸುವಂತೆ ಶಾಸಕ ಹರೀಶ್‌ ಪೂಂಜಾ ಒತ್ತಾಯ

Published

on

ಬೆಳ್ತಂಗಡಿ: ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಬೆಳ್ತಂಗಡಿಯ ವಿದ್ಯಾಥಿಧನಿ ಆಕಾಂಕ್ಷ ಮೃತದೇಹ ಇಂದು ಬೆಳಗ್ಗೆ ಆಕೆಯ ಬೊಳಿಯಾರ್ ಮನೆಗೆ ತಲುಪಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

 

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜಾ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸ ಬೇಕು. ಆಕಾಂಕ್ಷಳ ಸಾವಿಗೆ ನ್ಯಾಯ ಸಿಗ ಬೇಕು. ಕರ್ನಾಟಕದ ಗೃಹ ಸಚಿವರಿಗೆ ಆಗ್ರಹ ಮಾಡ್ತೇನೆ ಎಂದರು. ಪ್ರಕರಣದ ಸಮಗ್ರ ತನಿಖೆ ನಡೆಸಿ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದನ್ನು ಪತ್ತೆ ಮಾಡುವಂತೆ ಕರ್ನಾಟಕ ಸರಕಾರವು ಪಂಜಾಬ್ ಸರಕಾರವನ್ನು ಆಗ್ರಹಿಸ ಬೇಕೆಂದು ಒತ್ತಾಯಿಸಿದರು.

 

Continue Reading

DAKSHINA KANNADA

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ರಿಕ್ಷಾ

Published

on

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ರಿಕ್ಷಾ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿ ರಾತ್ರಿ 10.30ರ ವೇಳೆಗೆ ಪರ್ಪುಂಜ ಭಾಗದಿಂದ ಆಗಮಿಸಿದ ರಿಕ್ಷಾ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪಲ್ಟಿಯಾದ ರಿಕ್ಷಾ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಉರುಳಿ ಬಿದ್ದಿದೆ.

ಇದನ್ನೂ ಓದಿ: ಕಂಡೆಕ್ಟರ್ ಜೊತೆಗೂಡಿ ಹೈವೇಯಲ್ಲಿ ನಿಂತ ಸಾರಿಗೆ ಬಸ್ಸನ್ನು ತಳ್ಳಿದ ಮಹಿಳೆಯರು

ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸ್ವಲ್ಪವಾಲಿದೆ. ಅದೃಷ್ಟವಶಾತ್‌ ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page