Connect with us

LATEST NEWS

ವಧು ಅನ್ವೇಷಣೆಯಲ್ಲಿರುವ ಗೆಳೆಯನಿಗಾಗಿ ಗೆಳತಿ ಮಾಡಿದ ಕಾರ್ಯಕ್ಕೆ ಭೇಷ್ ಎಂದ ನೆಟ್ಟಿಗರು!!

Published

on

ಕೊಲ್ಕತ್ತಾ: ಒಬ್ಬ ಗೆಳೆಯನ ಸಂಕಷ್ಟಕ್ಕೆ ಮೊದಲಾಗಿ ಬರುವುದು ಗೆಳೆಯನೆ. ಸ್ನೇಹಿತರೆಂದರೆ ಹಾಗೆನೇ ಅಲ್ವಾ, ಯಾವುದೇ ಸಮಯದಲ್ಲೂ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಆತನ/ಆಕೆಯ  ಬೆಂಗಾವಲಾಗುತ್ತಾರೆ. ಇದೇ ರೀತಿ ಕೊಲ್ಕತ್ತಾದಲ್ಲೊಂದು ಅಪರೂಪದ ಆಶ್ಚರ್ಯಕ ಘಟನೆ ನಡೆದಿದೆ. ಗೆಳೆಯನಿಗಾಗಿ ಪಾರ್ಟ್ನರ್‌ ಅನ್ನು ಹುಡುಕುತ್ತಿರುವ ಸ್ನೇಹಿತೆಯೊಬ್ಬಳು ಪಾರ್ಕ್ ನಲ್ಲಿ “ವಧು ಬೇಕಾಗಿದ್ದಾಳೆ” ಎಂದು ಫ್ಲೆಕ್ಸ್ ಹಾಕಿದ್ದಾಳೆ. ಈ ಜಾಹಿರಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

flex

ಈ ಹುಡುಗನ ಹೆಸರು ರಿಯೋ. ಈತನ ಸ್ನೇಹಿತೆ ಅಂಚಲ್ ತನ್ನ ಸ್ನೇಹಿತನಿಗಾಗಿ ಹುಡುಕಿ ಹುಡುಕುವ ಜವಬ್ದಾರಿಯನ್ನು ಹೊತ್ತುಕೊಂಡಿದ್ದಳು. ಹಾಗಾಗಿ ರಸ್ತೆ ಬದಿಯಲ್ಲಿ ಜಾಹಿರಾತನ್ನು ಹಾಕಿ ಅದರಲ್ಲಿ ನನ್ನ ಸ್ನೇಹಿತ ರಿಯೋಗೆ ಸ್ನೇಹಿತೆಯ ಹುಡುಕಾಟದಲ್ಲಿರುವುದಾಗಿ ಬರೆಯಲಾಗಿದೆ.

ಜಾಹೀರಾತಿನಲ್ಲಿ ಏನಿದೆ?

ತನ್ನ ಸ್ನೇಹಿತ ಅತ್ಯುತ್ತಮ ಗೋಲ್ ಗಪ್ಪ ಅಂಗಡಿಯನ್ನು ಹೊಂದಿದ್ದಾನೆ. ವೃತ್ತಿಯಲ್ಲಿ ಫೊಟೋಗ್ರಾಫರ್ ಆಗಿದ್ದು,  ಅವನನ್ನು ಮದುವೆಯಾಗುವ ಹುಡುಗಿಗೆ ಬೇಕಾದಷ್ಟು ಕ್ಯಾಂಡಿಡ್ ಫೊಟೋಗಳನ್ನು ತೆಗೆಸಿಕೊಳ್ಳಬಹುದು. ಅದಲ್ಲದೆ ಪಾರ್ಕ್‌ ಸ್ಟ್ರೀಟ್ ನಲ್ಲಿ ದೊರೆಯುವ ಅದೇ ರೀತಿಯ ಕಥೀ ರೋಲ್‌ಗಳನ್ನು ರಿಯೋ ತಯಾರಿಸುತ್ತಾನೆ. ರಿಯೋನ ಟಿಂಡರ್ ಅಕೌಂಟ್‌ನ ಕ್ಯೂ ಆರ್ ಕೋಡ್‌ಅನ್ನು ಜಾಹಿರಾತಿನಲ್ಲಿ ಲಗತ್ತಿಸಿದ್ದಾಳೆ.

ಕೇವಲ ಜಾಹಿರಾತು ಅಲ್ಲದೇ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ಗೆ ಲಕ್ಷಾಂತರ ಮೆಚ್ಚುಗೆ ಬಂದಿದೆ. ರಿಯೋ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಸ್ನೇಹಿತೆ ಅಂಚಲ್ ನ ಈ ಕೆಲಸಕ್ಕೆ ನೆಟ್ಟಿಗರು ಫಿದಾ ಅಗಿದ್ದಾರೆ. ಎಲ್ಲರಿಗೂ ಇಂತಹ ಸ್ನೇಹಿತರು ಸಿಗಲಿ ಎಂದು ಬೇಡಿಕೊಂಡಿದ್ದಾರೆ.

 

 

DAKSHINA KANNADA

ಪ್ರಚೋದನಕಾರಿ ಪೋಸ್ಟ್: 4 ಇನ್ಸ್ಟಾಗ್ರಾಂ, 1 ಪೇಸ್ಬುಕ್ ಪೇಜ್ ರದ್ದು

Published

on

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 4 ಇನ್‌ಸ್ಟಾಗ್ರಾಂ ಹಾಗೂ 1 ಪೇಸ್‌ಬುಕ್ ಪೇಜ್‌ಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಈ ಪೇಜ್‌ಗಳನ್ನು ಡಿಆ್ಯಕ್ಟಿವೇಟ್ ಮಾಡಲಾಗಿದೆ.

“ವಿಎಚ್‌ಪಿ ಬಜರಂಗದಳ ಅಶೋಕನಗರ’ ಮತ್ತು “ಶಂಖನಾದ’ ಇನ್‌ ಸ್ಟಾಗ್ರಾಂ ಪೇಜ್ ವಿರುದ್ಧ ಉರ್ವ ಪೊಲೀಸ್ ಠಾಣೆ, “ಡಿಜೆ ಭರತ್ 2008” ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ, “ಕರಾವಳಿ ಅಫೀಶಿಯಲ್ ಇನ್‌ಸ್ಟಾಗ್ರಾಂ ಪೇಜ್” ವಿರುದ್ಧ ಪಾಂಡೇಶ್ವರ ಠಾಣೆ ಮತ್ತು “ಆಶಿಕ್ ಮೈಕಾಲ’ ಫೇಸ್‌ಬುಕ್ ಪೇಜ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: WATCH : ಸಿನಿಮೀಯ ರೀತಿಯಲ್ಲಿ ನಡೆದಿತ್ತು ಕಾರ್ ಚೇಸಿಂಗ್! ಸುಹಾಸ್ ಹ*ತ್ಯೆಯ ಮತ್ತೊಂದು ಸಿಸಿ ಟಿವಿ ವೀಡಿಯೋ ವೈರಲ್

ಈ ಪ್ರಕರಣಗಳ ತನಿಖೆಯನ್ನು ಸೆನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ 6 ಇನ್‌ಸ್ಟಾಗ್ರಾಂ ಹಾಗೂ 1 ಪೇಸ್‌ಬುಕ್ ಪೇಜನ್ನು ರದ್ದುಗೊಳಿಸಲಾಗಿದೆ.

Continue Reading

LATEST NEWS

ಮಳೆ ತಂದ ಆವಾಂತರ; ರಸ್ತೆ ಕಾಣದೆ ಮೀನಿನ ಲಾರಿ ಪಲ್ಟಿ

Published

on

ಹಾಸನ: ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಟೆ ಮನೆ ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಮೀನುಗಳನ್ನು ಸಾಗಿಸುತ್ತಿದ್ದ KA-02-AB-479 ನಂಬರ್‌ನ ಲಾರಿ ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪಲ್ಟಿಯಾಗಿದೆ.

ಇದನ್ನೂ ಓದಿ: ಮಂಗಳೂರು: ಬೈಕ್ ಸ್ಕಿಡ್ ಆಗಿ ಸವಾರ ಸಾ*ವು

ಇದರಿಂದಾಗಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

ಪಂಜಾಬ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು; ಆರ್‌ಸಿಬಿಗೆ ಗುಡ್‌ ನ್ಯೂಸ್..!

Published

on

ಮಂಗಳೂರು/ಜೈಪುರ: ಜೈಪುರದಲ್ಲಿ ಪಂಜಾಬ್ ಕಿಂಗ್ಸ್​ಗೆ ಡೆಲ್ಲಿಯ ಪವರ್ ಫುಲ್ ಡಿಚ್ಚಿ ನೀಡ್ತು. ಪಂಜಾಬ್ ನೀಡಿದ್ದ ಬೃಹತ್ ಟಾರ್ಗೆಟ್​ನ ಕೂಲ್ ಆ್ಯಂಡ್ ಕಾಮ್ ಆಗಿ ಚೇಸ್ ಡಿದ ಡೆಲ್ಲಿ, ಟೂರ್ನಿಗೆ ಗೆಲುವಿನ ವಿದಾಯ ಹೇಳ್ತು.

ಹೌದು, ಶನಿವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಗೆ ಸೋಲಿನ ಶಾಕ್ ನೀಡಿತು. ಅಂಕಪಟ್ಟಿಯಲ್ಲಿ ಆಗ್ರ ಸ್ಥಾನಕ್ಕೇರಿ ಪ್ಲೇ ಆಫ್ ನಲ್ಲಿ ಆಡುವ ಗುರಿ ಹೊಂದಿದ್ದ ಪಂಜಾಬ್ ಗೆ ಈಗಾಗಲೇ ಹೊರ ಬಿದ್ದಿರುವ ಡೆಲ್ಲಿ ಆಘಾತ ನೀಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 206 ರನ್​ ಕಲೆಹಾಕಿದರೆ, ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 19.3 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಡೆಲ್ಲಿ ಪಡೆ 6 ವಿಕೆಟ್​ಗಳ ಜಯ ಸಾಧಿಸಿದೆ.

ಆರ್‌ಸಿಬಿಗೆ ಗುಡ್‌ ನ್ಯೂಸ್..!
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜಯ ಸಾಧಿಸುತ್ತಿದ್ದಂತೆ, ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಕ್ವಾಲಿಫೈಯರ್ ಹಾದಿ ಸುಗಮವಾಗಿದೆ. ಅಂದರೆ ಆರ್​ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬೇಕಿದ್ದರೆ, ಮುಂದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಸಾಕು.

ಒಂದು ವೇಳೆ ಆರ್​ಸಿಬಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ, 19 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಲಿದೆ. ಇದೇ ವೇಳೆ ಪಂಜಾಬ್ ಕಿಂಗ್ಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೆ, ಆರ್​ಸಿಬಿ ತಂಡ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದು ಖಚಿತವಾಗಲಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ತಂಡದಲ್ಲಿ ಸ್ಥಾನ ಪಡೆದ ಮೂವರು ಕನ್ನಡಿಗರು

ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಗೆದ್ದರೂ ಆರ್​ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು. ಇದಕ್ಕಾಗಿ ಆರ್​ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನೆಟ್ ರನ್ ರೇಟ್ ಅನ್ನು ಗುರಿಯಾಗಿಸಿ ಅಮೋಘ ಗೆಲುವು ದಾಖಲಿಸಬೇಕಾಗುತ್ತದೆ.

ಹೀಗಾಗಿ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯವನ್ನು ಸಹ ಎದುರು ನೋಡಲಿದ್ದಾರೆ. ಈ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಲೀಗ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಜಯಗಳಿಸಿದರೆ ಸಾಕು. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಥವಾ ದ್ವಿತೀಯ ಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಬಹುದು.

 

Continue Reading
Advertisement

Trending

Copyright © 2025 Namma Kudla News

You cannot copy content of this page