Connect with us

LATEST NEWS

ಪ್ರೀತಿಗಾಗಿ ಪ್ರಾ*ಣ ಕಳೆದುಕೊಂಡಳು ಮಗಳು…ನೇ*ಣಿಗೆ ಶರಣಾದಳು ತಾಯಿ!

Published

on

ಇತ್ತೀಚೆಗೆ ಆತ್ಮಹ*ತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣ ಪುಟ್ಟ ಕಾರಣಗಳಿಗೂ ಜೀ*ವ ಕಳೆದುಕೊಳ್ಳುವವರಿದ್ದಾರೆ. ಇಲ್ಲೊಬ್ಬಳು ಯುವತಿ ಪ್ರೀತಿಗಾಗಿ ಪ್ರಾ*ಣ ಕಳೆದುಕೊಂಡಿದ್ದಾಳೆ. ಆಕೆಯ ತಾಯಿ ನೇಣಿ*ಗೆ ಶರಣಾಗಿದ್ದಾರೆ.

ಮಂಗಳೂರು/ಮಂಡ್ಯ : ತಾನು ಪ್ರೀತಿಸಿದ ಯುವಕ ಮದುವೆ ನಿರಾಕರಿಸಿದ ಎಂಬ ಕಾರಣಕ್ಕೆ ಯುವತಿ ಆತ್ಮಹ*ತ್ಯೆ ಮಾಡಿಕೊಂಡಿದ್ದಳು. ಆಕೆ ಇಹಲೋಕ ತ್ಯಜಿಸಿದ 20 ದಿನಗಳ ಬಳಿಕ ತಾಯಿಯೂ ನೇ*ಣಿಗೆ ಶರಣಾಗಿದ್ದಾಳೆ. ಈ ಘಟನೆ ನಡೆದಿರೋದು ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಎಂಬ ಗ್ರಾಮದಲ್ಲಿ.

ವಿಜಯಲಕ್ಷ್ಮಿ(21), ತಾಯಿ ಲಕ್ಷ್ಮಿ ಆತ್ಮಹ*ತ್ಯೆ ಮಾಡಿಕೊಂಡವರು.

ಮಾರಸಿಂಗನಹಳ್ಳಿಯ ಹರಿಕೃಷ್ಣ ಹಾಗೂ ವಿಜಯಲಕ್ಷ್ಮಿ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆದಿತ್ತು ಎನ್ನಲಾಗಿದೆ. ಆದರೆ, ಹರಿಕೃಷ್ಣ ಇತ್ತೀಚೆಗೆ ಬೇರೆ ಹುಡುಗಿಯ ಜೊತೆ ಓಡಾಡಲು ಆರಂಭಿಸಿದ್ದ. ಈ ಬಗ್ಗೆ ಪ್ರಶ್ನಿಸಿದ್ದ ವಿಜಯಲಕ್ಷ್ಮಿ ಮದುವೆ ಮಾಡಿಕೊಳ್ಳುವಂತೆ ಹಠ ಹಿಡಿದಾಗ, ಹರಿಕೃಷ್ಣ ನಿರಾಕರಿಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಬೆ*ದರಿಕೆಯೂ ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ವಿಜಯಲಕ್ಷ್ಮಿ ರೈಲಿಗೆ ತಲೆಕೊಟ್ಟು ಸಾ*ವಿನ ದಾರಿ ಹಿಡಿದಿದ್ದಳು. ಮಗಳ ಸಾ*ವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಯ ಮೆಟ್ಟಿಲೇರಿದ್ದರು. ಆದರೆ, ಅವರ ಮೇಲೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರಂತೆ. ಇದರಿಂದ ನೊಂದ ತಾಯಿ ಇದೀಗ ನೇ*ಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ : ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಬಾಲಿವುಡ್ ತಾರೆಯರು; ಟಿಕೆಟ್ ಬೆಲೆ ಎಷ್ಟು?

ಮೃ*ತದೇಹವನ್ನು ಸಾಗಿಸಲು ಬಿಡದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಾರೆ. ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

LATEST NEWS

ಮೊಘಲ್ ಹಾಗೂ ದಿಲ್ಲಿ ಸುಲ್ತಾನರ ಪಾಠವನ್ನು ಕೈಚೆಲ್ಲಿದ ಎನ್‌ಸಿಇಆರ್‌ಟಿ

Published

on

ಹೊಸದಿಲ್ಲಿ : ಈ ಹಿಂದೆ ಮೊಘಲ್ ಹಾಗೂ ದಿಲ್ಲಿ ಸುಲ್ತಾನರ ವಿಷಯವನ್ನು ಪಠ್ಯಪುಸ್ತದಿಂದ ಎನ್‌ಸಿಇಆರ್‌ಟಿ ಕಡಿತಗೊಳಿಸಿತ್ತು. ಆದರೆ ಈ ವರ್ಷ 7ನೇ ತರಗತಿ ಪಠ್ಯದಿಂದ ಆ ವಿಷಯಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಹಾಗಾದರೆ ಆ ವಿಷಯ ತೆಗೆದು ಬೇರೆ ಯಾವ ಹೊಸ ವಿಷಯನ್ನು ಸೇರಿಸುತ್ತಾರೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೊಘಲರು ಹಾಗೂ ದಿಲ್ಲಿ ಸುಲ್ತಾನರ ಸಾಮ್ರಾಜ್ಯದ ಬಗೆಗಿನ ಪಾಠಗಳನ್ನು ತೆಗೆದ ಎನ್‌ಸಿಇಆರ್‌ಟಿ  “ಪವಿತ್ರ ಭೂಗೋಳ ಶಾಸ್ತ್ರ’ ಎಂಬ ಪಾಠವನ್ನು ಸೇರಿಸಿದ್ದು, ಇದರಲ್ಲಿ ಮಹಾಕುಂಭದ ಮಾಹಿತಿಯನ್ನು ನೀಡಲಾಗಿದೆ.ಇದಲ್ಲದೇ ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ, ಬೇಟಿ ಪಡಾವೋ ಸೇರಿ ಸರಕಾರದ ಇನ್ನಿತರ ಉಪಕ್ರಮಗಳ ಪಾಠಗಳನ್ನೂ ಅಳವಡಿಸಲಾಗಿದೆ.

ಇದು ಪಠ್ಯಪುಸ್ತಕದ ಮೊದಲ ಭಾಗವಷ್ಟೇ, ಇನ್ನು ಕೆಲ ತಿಂಗಳುಗಳಲ್ಲಿ 2ನೇ ಭಾಗ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಪಠ್ಯದಿಂದ ಕೈಬಿಟ್ಟ ವಿಚಾರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Continue Reading

LATEST NEWS

ಅಂದು ನ್ಯಾಷುನಲ್ ಬ್ಯಾಂಕ್ .. ಇಂದು ಕಾಫಿ ಹೌಸ್ ..! ಏನಿದು ವಿಚಿತ್ರ ಕಥೆ ..?

Published

on

ಮುಂಬೈ : ಒಂದು ಸಮಯದಲ್ಲಿ ಆ ಕಟ್ಟಡ ನ್ಯಾಷುನಲ್ ಬ್ಯಾಂಕ್ ಆಗಿತ್ತು ಆದರೆ ಈಗ ಕಾಫಿ ಹೌಸ್ ಆಗಿ ಬದಲಾವಣೆ ಹೊಂದಿದೆ. ಈ  ವಿಷಯ ಮುಂಬೈ ನಗರದಾದ್ಯಂತ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಿದು ವಿಚಿತ್ರ ಕಥೆ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮುಂಬೈನ ಖ್ಯಾತ ಉದ್ಯಮಿ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ಅವರು ನಡೆಸಿದ್ದ ನ್ಯಾಷುನಲ್ ಬ್ಯಾಂಕ್ ಬಹುಕೋಟಿ ರೂ. ಹಗರಣದಿಂದ ಕುಖ್ಯಾತವಾಗಿದ್ದ ಮುಂಬೈನ ಬ್ರಾಡಿ ಹೌಸ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶಾಖೆಯ ಕಟ್ಟಡವನ್ನು ಕಾಫಿ ಹೌಸನ್ನಾಗಿ ಪರಿವರ್ತಿಸಲಾಗಿದೆ.

ಮುಂಬೈನ ಪಿಎನ್‌ಬಿ ಶಾಖೆಯನ್ನು ಮತ್ತೊಂದು ಕಟ್ಟಡಕ್ಕೆ ಕೆಲ ವರ್ಷಗಳ ಹಿಂದೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹಗರಣವೊಂದರ ಮೂಲಕ ಕೇಂದ್ರ ಬಿಂದುವಾಗಿದ್ದ ಬ್ರಾಡಿ ಹೌಸ್‌ನಲ್ಲಿ ಇಂದು ಆರ್ಗಾನಿಕ್ ಕಾಫಿ ಕೆಫೆ ತಲೆಯೆತ್ತಿದೆ. 2011-17ರವರೆಗೆ ನೀರವ್ ಮತ್ತು ಚೋಕ್ಸಿ, ಈ ಶಾಖೆಯ ಅಧಿಕಾರಿಗಳಿಗೆ ಲಂಚ ನೀಡಿ ಸುಮಾರು 13,000 ಕೋಟಿ ರೂ. ಸಾರ್ವಜನಿಕ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Continue Reading

DAKSHINA KANNADA

ವರುಣನ ಆರ್ಭಟಕ್ಕೆ ಮಂಗಳೂರು ಫುಲ್ ಕೂಲ್.. ಕೂಲ್.. !

Published

on

ಮಂಗಳೂರು : ಬೆಂದಿದ್ದ ಧರೆಯ ತಂಪಾಗಿಸಲು ಭುವಿಗಿಳಿದ ವರುಣ… ರಾತ್ರಿ ಮಲಗುವ ವೇಳೆ “ಎಂಥಾ ಸೆಕೆ ಮಾರ್ರೆ ?” ಎನ್ನುತ್ತಿದ್ದವರೂ ಸಹ ಫ್ಯಾನ್ ಆಫ್ ಮಾಡಿ ಮಲಗಿದ್ದಾರೆ. ಹೌದು .. ನಿನ್ನೆ(ಏ.27) ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಈ ಕುರಿತು ಮೊದಲೇ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡದ ಹಲವೆಡೆ ನಿನ್ನೆ ಹಾಗೂ ಮೊನ್ನೆ (ಏ.26) ಗುಡುಗು ಮಿಂಚು ಸಹಿತ ವರುಣನ ಆರ್ಭಟ ಜೊರಾಗಿಯೇ ಇತ್ತು,

ನಿನ್ನೆ ಹಗಲು ಬಿಸಿಲು ಇತ್ತು. ಆದರೆ ಸಂಜೆ ಹೊತ್ತಿಗೆ ಯಾರೂ ಊಹಿಸದ ರೀತಿ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಬಿಸಿ ಬಿಸಿಯಾಗಿದ್ದ ನಗರ ಫುಲ್ ಕೂಲ್ ಆಗಿದೆ. ಬಿಸಿ ವಾತಾವರಣ ಪೂರ್ತಿ ನಿವಾರಣೆಯಾಗಿದೆ.

ಎರಡು ಮೂರು ದಿನಗಳಿಂದ ದಕ್ಷಿಣ ಕನ್ನಡ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು (ಏ.28) ಮಂಗಳೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂಬುವುದಾಗಿ ಹವಮಾನ ಇಲಾಖೆ ಸೂಚಿಸಿದ್ದು, ಸಂಜೆ ತನಕ ಕಾದು ನೋಡಬೇಕಷ್ಟೇ.

Continue Reading
Advertisement

Trending

Copyright © 2025 Namma Kudla News

You cannot copy content of this page