Connect with us

LATEST NEWS

ಮಂಗಳೂರಿನ ಎಂಜಿ ರೋಡಿನಲ್ಲಿ ಅಬ್ಬರಿಸಿದ ನಾಲ್ಕನೇ ವರ್ಷದ ಪಿಲಿ ಅಜನೆ

Published

on

ಮಂಗಳೂರು : ದಸರಾ ಸಂಭ್ರಮಾಚರಣೆಯ ಪ್ರಯುಕ್ತ ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ರವಿರಾಜ್ ಚೌಟ ಸಹಭಾಗಿತ್ವದಲ್ಲಿ 4ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮವು ನಗರದ ಕೊಡಿಯಾಲ್ ಬೈಲ್ ಎಂಜಿ ರೋಡ್ ದೀಪಾ ಕಂಫರ್ಟ್ಸ್ ಬಳಿ ವಿಜೃಂಭಣೆಯಿಂದ ನಡೆಯಿತು.


ದೀಪ ಪ್ರಜ್ವಲಿಸುವ ಮೂಲಕ ಶಾಮ ರಾವ್ ಫೌಂಡೇಶನ್ ಹಾಗೂ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜ್ ಕಾರ್ಯದರ್ಶಿ ಎ. ಮಿತ್ರ ಎಸ್. ರಾವ್ ನೆರವೇರಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಸಂಸದ ಕ್ಯಾ. ಬೃಜೇಶ್ ಚೌಟ ಆಗಮಿಸಿ, ನಾನು ಮೊದಲ ವರ್ಷದಿಂದಲೇ ಪಿಲಿ ಅಜನೆ ಕಾರ್ಯಕ್ರಮಕ್ಕೆ ಓರ್ವ ತುಳುವನಾಗಿ ಆಗಮಿಸುತ್ತಿದ್ದು, ಈಗ ಸಂಸದನಾದರೂ ಕೂಡ ಪಿಲಿ ಅಜನೆ ತಂಡದ ಮೇಲಿರುವ ಅಭಿಮಾನದಿಂದ ಆಗಮಿಸಿದ್ದೇನೆ. ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ನಮ್ಮ ನಾಡಿನ ಸಾಂಪ್ರದಾಯಿಕ ಕಲೆಗಳು ಉಳಿಯುತ್ತದೆ. ಈ ನಿಟ್ಟಿನಲ್ಲಿ ಟೀಮ್ ಪಿಲಿ ಅಜನೆ ತುಳು ಸಂಸ್ಕೃತಿಯ ಉಳಿವಿಗೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದೆ ಎಂದರು. ಮಂಗೂರು ಉತ್ತರ ಶಾಸಕ ಡಾ. ಎಂ ವೈ ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಶುಭ ಹಾರೈಸಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿರುವ ರೆಮೊನಾ ಇವೆಟ್ ಪೆರೆರಾ ಇವರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಟೀಮ್ ಪಿಲಿ ಅಜನೆ ಗೌರವಧ್ಯಕ್ಷ ಕೇಶವ ಬಂಗೇರ, ರಕ್ಷಿತ್ ಶೆಟ್ಟಿ, ಕಿಶೋರ್ ಸಿಂಗ್ , ಮನೋಜ್ ಕುಮಾರ್, ರೂಪಾ ಡಿ. ಬಂಗೇರ, ಶರಣ್ ಶೆಟ್ಟಿ , ಪ್ರೇಮ್ ಸಾಲ್ಯಾನ್ ಬಿಜೈ, ರಕ್ಷಿತ್ ಆರ್ ಪೂಜಾರಿ, ಯಶ್‌ಪಾಲ್ ಸಾಲ್ಯಾನ್, ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಆರಂಭದಲ್ಲಿ ಭಕ್ತಿ-ಭಾವದ ಮಹಾಸಂಗಮವಾಗಿ ಶ್ರೀ ಧರ್ಮಶಾಸ್ತ ಸನ್ನಿಧಿ ಭಜನಾ ತಂಡ ಕುಳೂರು ಇವರಿಂದ ಕುಣಿತ ಭಜನೆ, ಶ್ರೀ ಮೂಕಾಂಬಿಕಾ ಚೆಂಡೆ ಹಾಗೂ ಶ್ರೀಜಿತ್ ಸರಳಾಯ ಮತ್ತು ಶ್ರೇಷ್ಠ ಕದ್ರಿ ಇವರಿಂದ ವಿಭಿನ್ನ ಶೈಲಿಯ ಚೆಂಡೆ-ವಾಯಲಿನ್-ಫ್ಯೂಶನ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಭಾಗದಲ್ಲಿ ನಡೆದ 2023 ರಿಂದ 2025ರವರೆಗಿನ ಹಲವು ಹುಲಿವೇಷ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ಅಗ್ರಮಾನ್ಯ ಪ್ರಶಸ್ತಿ ಪಡೆದ ಜನಮೆಚ್ಚಿದ ತಂಡ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ರಿ.) ಜಗದಂಬ ಹುಲಿ ತಂಡದಿಂದ ಹುಲಿ ಕುಣಿತವು ನೆರೆದಿದ್ದವರ ಮನಸೂರೆಗೊಂಡಿತು. ಹುಲಿ ಕುಣಿತಕ್ಕೂ ಮುನ್ನ ಶೋಭಯಾತ್ರೆಯು ನಡೆಯಿತು.

ಕಾರ್ಯಕ್ರಮದುದ್ದಕ್ಕೂ ಸಿಡಿಮದ್ದು ಪ್ರದರ್ಶನ ನಡೆಯಿತು. ಈ ಸಂದರ್ಭ ಟೀಮ್ ಪಿಲಿ ಅಜನೆ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು. ದೀಪಕ್ ಅಡ್ಯಾರು ನಿರೂಪಿಸಿದರು.

LATEST NEWS

ದೆಹಲಿ ಸ್ಫೋ*ಟ : ಡಿಎನ್‌ಎ ಪರೀಕ್ಷೆಯಿಂದ ಹೊರಬಿತ್ತು ಕಾರು ಚಲಾಯಿಸುತ್ತಿದ್ದುದು ಯಾರೆಂಬ ಸತ್ಯ!

Published

on

ಮಂಗಳೂರು/ನವದೆಹಲಿ :  ಕೆಂಪುಕೋಟೆ ಬಳಿ  ನ.10 ರಂದು ಸಂಭವಿಸಿದ ಸ್ಫೋ*ಟದಲ್ಲಿ 12 ಮಂದಿ ಪ್ರಾ*ಣ ಕಳೆದುಕೊಂಡಿದ್ದಾರೆ. ಸ್ಫೋಟಕ್ಕೆ ಬಳಸಲಾದ ಹೂಂಡೈ ಐ20 ಕಾರನ್ನು ಚಲಾಯಿಸುತ್ತಿದ್ದುದು ಯಾರೆಂಬುದು ಬಯಲಾಗಿದೆ. ಪುಲ್ವಾಮಾದ ವೈದ್ಯ ಉಮರ್ ನಬಿ ಎಂಬಾತನೇ ಕಾರು ಚಲಾಯಿಸುತ್ತಿದ್ದ ಎಂಬುದು ದೃಢಪಟ್ಟಿದೆ.

ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳಲ್ಲಿ ಮುಖವಾಡ ಧರಿಸಿದ್ದ ವ್ಯಕ್ತಿಯೊಬ್ಬ ಕಾರು ಚಾಲನೆ ಮಾಡಿದ್ದು ಕಂಡುಬಂದಿತ್ತು. ಕಾರನ್ನು ಚಾಲನೆ ಮಾಡಿದ ವ್ಯಕ್ತಿ ಪುಲ್ವಾಮಾದ ವೈದ್ಯ ಉಮರ್ ನಬಿ ಎಂದು ತನಿಖಾಧಿಗಳು ಗುರುತಿಸಿದ್ದು, ಡಿಎನ್‌ಎ ಪರೀಕ್ಷೆ ಮೂಲಕ  ಖಚಿತವಾಗಿದೆ.

ಸ್ಫೋಟಗೊಂಡ ಕಾರಿನಲ್ಲಿ ಶಂಕಿತನ ದೇಹದ ಭಾಗಗಳು ಪತ್ತೆಯಾಗಿದ್ದವು. ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪುಲ್ವಾಮಾದಲ್ಲಿರುವ ಡಾ. ನಬಿ ಅವರ ತಾಯಿಯಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದರು.

ಇದನ್ನೂ ಓದಿ :WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿ ಹಾಗೂ ಆತನ ತಾಯಿಯ ಡಿಎನ್ಎ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಕಾರನ್ನು ಡಾ.ಉಮರ್ ನಬಿ ಚಾಲನೆ ಮಾಡುತ್ತಿದ್ದರು ಎಂಬುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

Continue Reading

LATEST NEWS

ನ.16ರಂದು ಮಣ್ಣಗುಡ್ಡೆ ಗುರ್ಜಿ

Published

on

ಮಂಗಳೂರು: ಶರವು ಶ್ರೀ ಮಹಾಗಣಪತಿ ದೇವರ 156ನೇ ದೀಪಾರಾಧನೆಯ ಉತ್ಸವ ಮಣ್ಣಗುಡ್ಡೆ ಗುರ್ಜಿ ನವೆಂಬರ್ 16ರಂದು ಭಾನುವಾರ ವೈಭವದಿಂದ ಜರುಗಲಿದೆ.


ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್‌, ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮತ್ತು ಮಣ್ಣಗುಡ್ಡ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕದ ವತಿಯಿಂದ ಆಯೋಜಿಸಲ್ಪಡುವ ಗುರ್ಜಿ ಉತ್ಸವದಲ್ಲಿ ಗುರ್ಜಿ ಮುಂಭಾಗದಲ್ಲಿ ಭಜನಾ ಕಾರ್ಯಕ್ರಮ ನಡೆದು ಸಂಜೆ 6 ಗಂಟೆಯಿಂದ ಮಹಾಪೂಜೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದನ್ನೂ ಓದಿ: ಕುದ್ರೋಳಿ ಕ್ಷೇತ್ರದಲ್ಲಿ ಇಂದು ಭೈರವಾಷ್ಟಮಿ

ಸಂಜೆ 6.30ರಿಂದ ಸುದೀಕ್ಷ ಆರ್ ಸುರತ್ಕಲ್‌ ಇವರಿಂದ ನಾದಾರ್ಚನೆ, 8 ಗಂಟೆಗೆ ಸಭಾ ಕಾರ್ಯಕ್ರಮ, ರಾತ್ರಿ 9.30ರಿಂದ ನೃತ್ಯೋಲ್ಲಾಸ ಹಾಗೂ ಸಂಭವಾಮಿ ಯುಗೇ ಯುಗೇ (ದಶಾವತಾರ) ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Continue Reading

FILM

WATCH VIDEO : ಎಲ್ಲರೆದುರು ರಶ್ಮಿಕಾ ಮಂದಣ್ಣಗೆ  ವಿಜಯ್ ದೇವರಕೊಂಡ ಸಿಹಿಮುತ್ತು; ವೀಡಿಯೋ ವೈರಲ್

Published

on

ಮಂಗಳೂರು/ಹೈದರಾಬಾದ್ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗೆಗಿನ ಸುದ್ದಿಯೇನು ಹೊಸತಲ್ಲ.  ಇವರಿಬ್ಬರ ಪ್ರೀತಿ, ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಇದೀಗ ಈ ಗಾಸಿಪ್‌ಗೆ ಪುಷ್ಠಿ ಕೊಡುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹೀಗಾಗಿ ಚಿತ್ರ ತಂಡ ನವೆಂಬರ್ 12 ರಂದು ಹೈದರಾಬಾದ್​ನಲ್ಲಿ ಸಕ್ಸಸ್ ಮೀಟ್ ಇಟ್ಟುಕೊಂಡಿತ್ತು. ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ರಶ್ಮಿಕಾ ಕಾಣುತ್ತಿದ್ದಂತೆ ವಿಜಯ್ ದೇವರಕೊಂಡ ನಕ್ಕಿದ್ದಾರೆ. ರಶ್ಮಿಕಾ ಕೈ ಹಿಡಿದು ಕುಲುಕಿದ್ದಾರೆ. ಬಳಿಕ ಕೈಗೆ ಮುತ್ತಿಕ್ಕಿದ್ದಾರೆ. ಇದರಿಂದ ರಶ್ಮಿಕಾ ಮತ್ತಷ್ಟು ಖುಷಿಕೊಂಡರು. ಸದ್ಯ  ಈ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ :  ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಹುಭಾಷಾ ನಟಿ ನಯನ ತಾರಾ ದಂಪತಿ ಭೇಟಿ

ಈ ವೀಡಿಯೋ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇವರದ್ದು ಬೆಸ್ಟ್ ಜೋಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page