Connect with us

DAKSHINA KANNADA

Udupi: 43 ಗಂಟೆಗಳ ಕಾಲ ಸಮುದ್ರದಲ್ಲೇ ಈಜುತ್ತಾ ಜೀವ ಉಳಿಸಿಕೊಂಡ ಮೀನುಗಾರ..!

Published

on

ಉಡುಪಿ: ಮೀನುಗಾರಿಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೋಟ್‌ ನಿಂದ ಸಮುದ್ರಕ್ಕೆ ಬಿದ್ದ ತಮಿಳುನಾಡು ಮೂಲದ   ಮೀನುಗಾರರೊಬ್ಬರು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಾ ಜೀವ ಉಳಿಸಿಕೊಂಡ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೂಲದ ಬೋಟ್‌ ನಿಂದ ಸುಮಾರು 25 ವರ್ಷ ಪ್ರಾಯದ ಓರ್ವ ಮೀನುಗಾರ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಅವರನ್ನು ಕಳೆದ ಎರಡು ದಿನಗಳಿಂದ ತಮಿಳುನಾಡು ಮೀನುಗಾರರು ಹುಡುಕುತ್ತಿದ್ದರು. ಇಂದು ಗಂಗೊಳ್ಳಿಯಿಂದ ತೆರಳುತ್ತಿದ್ದ ಮೀನುಗಾರಿಕಾ ಬೋಟ್ ನವರಿಗೆ ಈ ಮೀನುಗಾರ ಕಾಣ ಸಿಕ್ಕಿದ್ದಾರೆ. ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಸಂಪೂರ್ಣವಾಗಿ ನಿತ್ರಾಣಗೊಂಡಿದ್ದರು. ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಗಂಗೊಳ್ಳಿಯ ಮೀನುಗಾರರು ಬಳಿಕ ಅವರನ್ನು ತಮಿಳುನಾಡಿನ ಮೀನುಗಾರರಿಗೆ ಹಸ್ತಾಂತರಿಸಿದ್ದಾರೆ. ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಶವವಾದರೂ ದೊರೆಯ ಬಹುದೆಂದು ಹುಡುಕಾಡುತ್ತಿದ್ದ ತಮಿಳುನಾಡಿನ ಮೀನುಗಾರರಿಗೆ ಈತ ಸಮುದ್ರದಲ್ಲಿ ಜೀವಂತವಾಗಿ ಸಿಕ್ಕಿರುವುದನ್ನು ಕಂಡು ಶಾಕ್ ಆಗಿದೆ. ಈ ನಡುವೆ ಗಂಗೊಳ್ಳಿಯ ಮೀನುಗಾರರು ನಾಪತ್ತೆಯಾಗಿದ್ದ ಮೀನುಗಾರನನ್ನು ರಕ್ಷಿಸಿದ ಸಂತಸದಲ್ಲಿದ್ದಾರೆ.

 

DAKSHINA KANNADA

ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಗೆ LAPT ಗೌರವ..! ನಮ್ಮ ಕುಡ್ಲ ಸಹಯೋಗದಲ್ಲಿ ಮಾಸ್ ಕಮ್ಯುನಿಕೇಷನ್ ಕೋರ್ಸ್ ಪ್ರಾರಂಭ..!

Published

on

ಮಂಗಳೂರು : ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಔದ್ಯೋಗಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಮಂಗಳೂರಿನ ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ಗೆ 20 ವರ್ಷ ತುಂಬಿದೆ. 2005 ರಲ್ಲಿ ಮಂಗಳೂರಿನ ಪಂಪ್ವೆಲ್‌ ನಲ್ಲಿ ಆರಂಭವಾದ ಈ ಸಂಸ್ಥೆ ಸಾವಿರಾರು ಯುವಕ ಯುವತಿಯರಿಗೆ ವಿಶೇಷ ತರಬೇತಿಯನ್ನು ನೀಡಿ ಉದ್ಯೋಗ ಒದಗಿಸುವ ಕೆಲಸ ಮಾಡಿದೆ. ಇದರ ಇಪ್ಪತ್ತನೇ ವರ್ಷಾಚರಣೆಯು ಸಂಭ್ರಮ್ 2025 ಎಂಬ ಹೆಸರಿನಲ್ಲಿ ಮಂಗಳೂರಿನ ಖಾಸಗಿ ಹೊಟೇಲ್ ನ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆದಿದೆ. ಇದೇ ಕಾರ್ಯಕ್ರಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐಜಿಐ ಸಂಸ್ಥೆಯಲ್ಲಿ ಮಾಸ್ ಮೀಡಿಯಾ ಕಮ್ಯುನಿಕೇಷನ್ ಕೋರ್ಸ್ ಆರಂಭಿಸುವ ಕುರಿತಾಗಿ ಘೋಷಣೆ ಮಾಡಲಾಗಿದೆ.

ಕರಾವಳಿಯ ಪ್ರತಿಷ್ಠಿತ ಹಾಗೂ ಹೆಮ್ಮೆಯ ವಾಹಿನಿಯಾಗಿರುವ ನಮ್ಮ ಕುಡ್ಲ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕೋರ್ಸ್ ಆರಂಭವಾಗಲಿದೆ. ಈ ಹೊಸ ಕೋರ್ಸ್ ನ ಘೋಷಣೆಯನ್ನು ನಮ್ಮ ಕುಡ್ಲ ವಾಹಿನಿಯ ಸಿಒಒ ನವನೀತ ಶೆಟ್ಟಿ ಅವರು ಮಾಡಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯಂತ್ ಕೋಡ್ಕಿಣಿ ಅವರು ಇದರ ಕುರಿತಾದ ಬ್ರೋಶರ್ ನ್ನು ಗಣ್ಯರ ಸಮಕ್ಷಮದಲ್ಲಿ ಅನಾವರಣ ಮಾಡಿದ್ದಾರೆ.

ಕಾರ್ಯಕ್ರಮವನ್ನು  ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹಿರಿಯ ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಗಣ್ಯರಿಂದ ಶುಭಹಾರೈಕೆ :

ಐಜಿಐ ಸಂಭ್ರಮ್‌ 2025ರ ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ಕೋರ್ಸ್‌ಗಳ ಅಗತ್ಯ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು, ಐಜಿಐ ಅದನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದು ಶುಭ ಹಾರೈಸಿದ್ದಾರೆ.

ಶಾಸಕ ವೇದವ್ಯಾಸ್ ಕಾಮತ್ ಅವರು ಕೂಡ ಐಜಿಐ ಹಾಗೂ ನಮ್ಮಕುಡ್ಲ ಸಂಸ್ಥೆ ಜಂಟಿಯಾಗಿ ಪ್ರಾರಂಭ ಮಾಡಿರುವ ಮಾಸ್ ಮೀಡಿಯಾ ಕಮ್ಯುನಿಕೇಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶ :

ಐಜಿಐಗೆ ಲಂಡನ್ ಅಕಾಡೆಮಿ ಆಫ್ ಪ್ರೊಫೇಷನಲ್ ಟ್ರೈನಿಂಗ್ ಇದರ  ಮಾನ್ಯತೆ ದೊರೆತಿದ್ದು, ಇದೇ ಕಾರ್ಯಕ್ರಮದಲ್ಲಿ ಐಜಿಐ ಸಂಸ್ಥೆಯ ಆಡಳಿತ ನಿರ್ದೇಶಕ ಮುರಳಿ ಹೊಸಮಜಲು ಹಾಗೂ ನಿರ್ದೇಶಕರಾದ ಸಜಿತಾ ಎಂ ನಾಯರ್ ಅವರಿಗೆ ಈ ಲಾಪ್ಟ್ ನಿಂದ ಮಾಸ್ಟರ್ ಟ್ರೈನರ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಐಜಿಐಗೆ ಲಾಪ್ಟ್ ಮಾನ್ಯತೆ ದೊರಕಿರುವ ಕಾರಣದಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶಕ್ಕೂ ಅನುಕೂಲವಾಗಲಿದೆ.

ಇದನ್ನೂ ಓದಿ : 9 ತಿಂಗಳ ಬಳಿಕ ಮಾ.18ರಂದು ಸುನಿತಾ ಭೂಮಿಗೆ ವಾಪಸ್; ಗಗನಯಾನಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ?

ಐಜಿಐ ಸಂಭ್ರಮ್ 2025 ಅದ್ಧೂರಿಯಾಗಿ ನಡೆದಿದ್ದು, ವಿಶೇಷವಾಗಿ ಐಜಿಐ ನಿರ್ದೇಶಕ ಮುರಳಿ ಹೊಸಮಜಲು ಅವರ ಮಾತೃಶ್ರೀ ಶ್ರೀಮತಿ ರಾಜಮ್ಮ ಅವರ ನೆನಪಿಗಾಗಿ , ಶ್ರೀಮತಿ ರಾಜಮ್ಮ ಸ್ಮಾರಕ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಮಾಡಲಾಗಿದೆ. ಇದರ ಮೂಲಕ ಮಹಿಳಾ ಸಬಲೀಕರಣಕ್ಕೆ ಬೇಕಾದ ಪೂರಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಹಾಗೂ ವಿವಿಧ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವೂ ಈ ಕಾರ್ಯಕ್ರಮದಲ್ಲಿ ನಡೆದಿದೆ.

ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆದಿದ್ದು, ವಿದ್ಯಾರ್ಥಿಗಳು ಸಂಗೀತ ಹಾಗೂ ನೃತ್ಯದ ಮೂಲಕ ಅತಿಥಿಗಳನ್ನು ರಂಜಿಸಿದ್ದಾರೆ.

Continue Reading

DAKSHINA KANNADA

ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಚೀಂವ್ ಚೀಂವ್ ಅಭಿಯಾನ

Published

on

ಬಂಟ್ವಾಳ: ಬೇಸಗೆಯಲ್ಲಿ ಮನುಷ್ಯನಿಗೆ ಹೇಗೆ ಬಾಯಾರಿಕೆ ಆಗುತ್ತದೆಯೋ ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಬಾಯಾರಿಕೆ ಆಗುತ್ತದೆ. ಆದರೆ ಬೇಸಗೆಯಲ್ಲಿ ನೀರು ಸಿಗದೆ ಪ್ರಾಣಿ ಪಕ್ಷಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಕಾರಣ ಅವುಗಳಿಗೂ ನೀರುಣಿಸುವುದು ನಮ್ಮ ಜವಾಬ್ದಾರಿ. ಈ ಬಗ್ಗೆ ಬಿ.ಸಿ.ರೋಡ್ ನ ಮೊಡಂಕಾಪಿನ ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಚೀಂವ್ ಚೀಂವ್ ಅಭಿಯಾನ ನಡೆಸಿದ್ದಾರೆ.

ನೀರು ಸಿಗದೆ ಪರದಾಡುವ ಪಕ್ಷಿಗಳಿಗೆ ಶಾಲಾ ಆವರಣದಲ್ಲಿ ತೆಂಗಿನ ಗೆರಟೆಗಳನ್ನು ಇರಿಸಿ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಸುಮಾರು 252 ಈ ರೀತಿಯ ಗೆರಟೆಗಳನ್ನು ಇರಿಸಿ ನಿತ್ಯ ಇದಕ್ಕೆ ನೀರು ಹಾಕಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುವಂತೆ ಮಾಡಿದ್ದಾರೆ.

ಇಲ್ಲಿನ ಶಿಕ್ಷಕ ರೋಶನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ಪರಿಸರ ಸ್ನೇಹಿ ಕೆಲಸ ನಡೆಸಲಾಗಿದೆ. ಕಳೆದ ಐದು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಬೇಸಗೆಯಲ್ಲಿ ಪಕ್ಷಿಗಳಿಗೆ ಆಹಾರ ಇಡಲು ಪಾತ್ರೆ ತಯಾರಿಸಿ ಶಾಲೆಯ ಸುತ್ತ ಮುತ್ತ ಹಾಗೂ ಮನೆಗಳ ಸುತ್ತಮುತ್ತ ಇಟ್ಟು ಪಕ್ಷಿಗಳ ಬಾಯಾರಿಕೆ ನೀಗಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಅಧ್ಯಯನಕ್ಕೂ ಸಹಕಾರಿಯಾಗಿದ್ದು, ಶಾಲೆಯ ವತಿಯಿಂದ ಪಕ್ಷಿಗಳು ಆಹಾರ ನೀರು ಸೇವಿಸುವ ಫೋಟೋ ಸ್ಪರ್ಧೆಯನ್ನೂ ಏರ್ಪಡಿಸಿ ಬಹುಮಾನ ನೀಡಲಾಗಿದೆ. ಮಕ್ಕಳ ಈ ಜಾಗೃತಿ ಅಭಿಯಾನ ಪ್ರತಿಯೊಬ್ಬರು ಕನಿಷ್ಟ ತಮ್ಮ ಮನೆಯ ಕಿಟಕಿಯಲ್ಲಿ ಪಕ್ಷಿಗಳಿಗೆ ನೀರಿಡುವಂತೆ ಪ್ರೇರೇಪಿಸಿದೆ.

Continue Reading

DAKSHINA KANNADA

ಅನ್ಯಧರ್ಮದ ಯುವತಿಯರನ್ನ ಮದುವೆ ಆಗಲು ಸಲಹೆ…ಸಂಕಷ್ಟದಲ್ಲಿ ಸೂಲಿಬೆಲೆ!

Published

on

ಮಂಗಳೂರು : ಭಾರೀ ವಿವಾದ ಸೃಷ್ಟಿಸಿದ್ದ ಚಕ್ರವರ್ತಿ ಸೂಲಿಬೆಲೆ ಅವರ ‘ಅನ್ಯಧರ್ಮೀಯ’ ವಿವಾಹ ಸಲಹೆ ಈಗ ಸಂಕಷ್ಟ ತಂದೊಡ್ಡಿದೆ. ಕೋಮುದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ಮುಖಂಡ ರಶೀದ್ ಉಳ್ಳಾಳ ಠಾಣೆಗೆ ದೂರು ನೀಡಿದ್ದಾರೆ.

ಏನಂದಿದ್ರು ಸೂಲಿಬೆಲೆ?

ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಮಾರ್ಚ್ 9 ರಂದು ಕದ್ರಿ ಮಂಜುನಾಥ  ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜ ಆದಿಕ್ಷೇತ್ರಕ್ಕೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆ ನಡೆದಿತ್ತು. ಸಮಾರೋಪ ಸಮಾರಂಭದಲ್ಲಿ ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಘರ್ ವಾಪ್ಸಿ ಬಗ್ಗೆ ಮಾತನಾಡಿದ್ದರು.

ಮತಾಂತರ ಎಂದು ಬಾಯಿ ಬಡಿದುಕೊಳ್ಳುವುದು ಸಾಕು. ಈಗ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡೋ ಬಗ್ಗೆ ಮಾತಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು? ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ ಅಂತ ನಮ್ಮ ಗಂಡು ಮಕ್ಕಳಿಗೆ ಕೇಳೋಣ. ಬೇರೆ ಧರ್ಮದ ಹುಡುಗಿಯರನ್ನೂ ನೋಡು ಅಂತ ಹೇಳಬೇಕು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದಿದ್ದರು.

ಇದನ್ನೂ ಓದಿ : 9 ತಿಂಗಳ ಬಳಿಕ ಮಾ.18ರಂದು ಸುನಿತಾ ಭೂಮಿಗೆ ವಾಪಸ್; ಗಗನಯಾನಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ?

ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಲ್ಲ ಅನ್ನೋವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಯಿದೆ ಎಂದು ಧೈರ್ಯ ತುಂಬಿ. ನಾವು ಆಕ್ರಮಣಕಾರಿಯಾಗಿ ಆಡಬೇಕು, ರಕ್ಷಣಾತ್ಮಕವಾಗಿ ಆಡಿದ್ದು ಸಾಕು. ಟೆಸ್ಟ್ ಮ್ಯಾಚ್‌ಗಳು ನಿಂತು ಹೋಯ್ತು. ಈಗ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡೋ ಸಮಯ ಬಂದಾಗಿದೆ. ಇರುವ ಇಪ್ಪತ್ತು ಓವರ್‌ನಲ್ಲಿ ಬಡಿಬೇಕು ಅಷ್ಟೇ. ಘರ್ ವಾಪ್ಸಿ ಹೇಗೆ ಮಾಡೋದು ಅನ್ನೋದರ ಬಗ್ಗೆ ರೀಲ್ಸ್ ಮಾಡಿ. ಹಿಂದೂ ಧರ್ಮದಿಂದ ಹೋಗಿರುವವರನ್ನ ಮೊದಲು ವಾಪಸ್ ತರೋಣ ಎಂದು ಹೇಳಿದ್ದರು.

ಈ ಹೇಳಿಕೆಗೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಹುಟ್ಟುಕೊಂಡಿದ್ದವು.

Continue Reading
Advertisement

Trending

Copyright © 2025 Namma Kudla News

You cannot copy content of this page