Connect with us

MANGALORE

ಮೂಡುಬಿದಿರೆ: 223ನೇ ಮೋರ್ ಸೂಪರ್ ಮಾರುಕಟ್ಟೆ ಶುಭಾರಂಭ, ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ಸ್

Published

on

ಮೂಡುಬಿದಿರೆ: ಕರ್ನಾಟಕದಲ್ಲಿ ಅತೀ ದೊಡ್ಡ ಮಾರುಕಟ್ಟೆ ಜಾಲವನ್ನು ಹೊಂದಿರುವ ಮೋರ್ ಸೂಪರ್ ಮಾರ್ಕೆಟ್‌ ಇದೀಗ ಬೆಳೆಯುತ್ತಿರುವ ಶಿಕ್ಷಣ ನಗರಿ ಮೂಡುಬಿದಿರೆಯಲ್ಲೂ ಆರಂಭಗೊಂಡಿದೆ. ಮೂಡುಬಿದಿರೆಯ ಪಡಿವಾಳ್‌ ರೆಸ್ಟೋರೆಂಟ್ ಮುಂಭಾಗದಲ್ಲಿ ನೂತನ ಮೋರ್ ಸೂಪರ್‌ ಮಾರುಕಟ್ಟೆ ಅಕ್ಟೋಬರ್ 31ರಿಂದ ಅದ್ದೂರಿಯಾಗಿ ಆರಂಭಗೊಂಡಿದೆ.

ಇದು ಕರ್ನಾಟಕದ 223ನೇ ಮೋರ್ ಶಾಖೆಯಾಗಿದ್ದು, ಇಲ್ಲಿನ ಬೆದ್ರ ಟವರ್‌ನಲ್ಲಿ ಆರಂಭಗೊಂಡಿರುವ ಮೋರ್ ಸೂಪರ್ ಮಾರುಕಟ್ಟೆಯಲ್ಲಿ ಪ್ರಾರಂಭೋತ್ಸವದ ಅಂಗವಾಗಿ ಉದ್ಘಾಟನಾ ಕೊಡುಗೆಗಳನ್ನು ಕೂಡಾ ನೀಡಲಾಗುತ್ತಿದೆ. ಮೋರ್ ಸಿಬ್ಬಂದಿಗಳೇ ಜೊತೆಗೂಡಿ ನೂತನ ಮಾರುಕಟ್ಟೆಯನ್ನು ಉದ್ಘಾಟನೆ ಮಾಡಿರುವುದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಮೋರ್‌ ರೀಟೈಲ್‌ ಸರ್ಕಲ್‌ ಡೈರೆಕ್ಟರ್‌ ಅಂಕಿತ್‌ ಆಕಾಶ್‌, ಕೋಸ್ಟಲ್‌ ಕರ್ನಾಟಕದ ರೀಜನಲ್‌ ಆಪರೇನ್‌ ಹೆಡ್‌ ಮಲ್ಲಿಕಾರ್ಜುನ್‌ ಎಸ್, ಏರಿಯಾ ಮ್ಯಾನೇಜರ್‌ ಐಯ್ಯನ ಎಂಸಿ ಮೊದಲಾದವರಿದ್ದರು.

ಒಂದು ವರ್ಷದವರೆಗೆ ಖರೀದಿಸುವ ಗ್ರಾಹಕರಿಗೆ ಕನಿಷ್ಠ ಶೇಕಡಾ 5 ಕ್ಯಾಶ್‌ ಬ್ಯಾಕ್‌ ನೀಡಲಾಗುತ್ತಿದೆ. 1000ಕ್ಕೂ ಮಿಕ್ಕಿದ ಸೊತ್ತುಗಳಲ್ಲಿ ಬೈ ಒನ್ ಗೆಟ್‌ ಒನ್‌ ಇದೆ. 3499 ರೂಪಾಯಿಗಳ ಖರೀದಿಗೆ ಮೂರು ಲೀಟರಿನ ಪ್ರೆಶರ್ ಕುಕ್ಕರ್‌ ಹಾಗೂ 1499 ಹಾಗೂ ಅದಕ್ಕಿಂತ ಮೇಲಿನ ದರದಲ್ಲಿ ಖರೀಧಿಸುವ ಸೊತ್ತುಗಳಿಗೆ ಕಂಟೈನರ್‌ ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಹಣ್ಣುಹಂಪಲು ಖರೀದಿಯಲ್ಲಿ 300 ರೂಪಾಯಿಗಿಂತ ಹೆಚ್ಚು ಖರೀಧಿಸಿದಲ್ಲಿ 25 ರೂಪಾಯಿ ಕಡಿತವಾಗಲಿದೆ.

ಇದರ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 31ನೇ ಮೋರ್ ಸೂಪರ್ ಮಾರುಕಟ್ಟೆ ಉದ್ಘಾಟನೆ ಮಾಡಿದ್ದೇವೆ. ಉದ್ಘಾಟನಾ ಅಂಗವಾಗಿ ವಿಶೇಷ ಕೊಡುಗೆ ನೀಡಲಾಗುತ್ತದೆ. ಇದರ ಪ್ರಯೋಜನವನ್ನು ನಮ್ಮ ಗ್ರಾಹಕರು ಪಡೆದುಕೊಳ್ಳಬೇಕು ಎಂದು ಮೋರ್ ಸೂಪರ್ ಮಾರುಕಟ್ಟೆಯ ಏರಿಯಾ ಮ್ಯಾನೇಜರ್‌ ಐಯ್ಯನ ಎಂಸಿ ತಿಳಿಸಿದ್ದಾರೆ.

DAKSHINA KANNADA

ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ

Published

on

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಆರಂಭತ್ಸೋತ್ಸವ ಶುಭ ಸಂದರ್ಭದಲ್ಲಿ ಸ್ವರ್ಗೀಯ ಮಚ್ಚಾರು ಪಡಿಲು ಶ್ಯಾಮಲ ಚಂದು ಪೂಜಾರಿಯವರ ಸ್ಮರಣಾರ್ಥ ಪದ್ಮನಾಭ ಕಟೀಲು ದುಬಾಯಿ ಮತ್ತು ಮನೆಯವರಿಂದ ಕಟೀಲು ಏಳೂ ಮೇಳಕ್ಕೆ ನಂದಿನಿಯ ಶೃಂಗದ ಸೇವೆ ಸಮರ್ಪಿಸಲಿದ್ದಾರೆ.

ನ.16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪದಾರ್ಪಣೆ ಹಾಗೂ ಏಳು ಮೇಳಗಳ ತಿರುಗಾಟ ಆರಂಭ ಸಲುವಾಗಿ ನವೆಂಬರ್ 15ರಂದು ಬಜಪೆಯಿಂದ ಕಟೀಲುವರೆಗೆ ಮೇಳಗಳ ದೇವರು, ಪರಿಕರಗಳ ಮೆರವಣಿಗೆ ನಡೆಯಲಿದೆ.

Continue Reading

DAKSHINA KANNADA

ಆಲ್ ನ್ಯೂ ಹ್ಯೂಂಡೈ ವೆನ್ಯೂ ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ

Published

on

ಬೆಳ್ತಂಗಡಿ: ಅದ್ವೈತ್ ಹುಂಡೈ ಕಂಪೆನಿ ತನ್ನ ವಿಶಿಷ್ಟ ಗುಣಮಟ್ಟ ಮತ್ತು ಸೇವೆಯಿಂದ ವಿಶ್ವಾಸಾರ್ಹ ಗ್ರಾಹಕರನ್ನು ಹೊಂದಿದೆ. ಇದು ಕರ್ನಾಟಕದಾದ್ಯಂತ 23 ಶೋ ರೂಂಗಳು, 37 ಸೇವಾ ಕೇಂದ್ರಗಳು, 4 ಪ್ರಿ-ಒನ್ಡ್ ಕಾರು ಶೋರೂಮ್‌ಗಳ ಬೃಹತ್ ಜಾಲ ಬಲದಿಂದ ದೇಶದ ಅಗ್ರಗಣ್ಯ ಡೀಲರ್ ಆಗಿರುವ ಅದ್ವೈತ್ ಹ್ಯೂಂಡೈ ದಕ್ಷಿಣ ಮಂಗಳೂರಿನ ಬೈಕಂಪಾಡಿ ಕುಂಟಿಕಾನ, ಸುಳ್ಯ, ಬೆಳ್ತಂಗಡಿಯಲ್ಲಿ ಸೇವಾ ಕೇಂದ್ರವನ್ನು ಹೊಂದಿದೆ. ಹುಂಡೈ ವೆನ್ಯೂ ಅನ್ನು ಮೊದಲು 2019 ರಲ್ಲಿ ಬಿಡುಗಡೆ ಮಾಡಲಾಯಿತು.


ಇದೀಗ ನೂತನ ಆಲ್ ನ್ಯೂ ಹ್ಯೂಂಡೈ ವೆನ್ಯೂ ಕಾರು ಬೆಳ್ತಂಗಡಿ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಬೆಳ್ತಂಗಡಿಯ ಅದ್ವೈತ್ ಹೂಂಡೈ ಶೋರೂಂನಲ್ಲಿ ನೆರೆವೇರಿತು.
ನೂತನ ಕಾರನ್ನು ರೈಡಿಂಗ್ ಜೋಡಿ ಯೂಟ್ಯೂಬ್ ಚಾನೆಲ್‌ನ ಶ್ಯಾಮ್ ಪ್ರಸಾದ್ ಕಾಮತ್ ಮತ್ತು ಶೈನಿ ಕಾಮತ್ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

2019ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಹ್ಯೂಂಡೈ ವೆನ್ಯೂ ಇದೀಗ 6 ವರ್ಷಗಳ ಬಳಿಕ ಹೊಸ ರೂಪದಲ್ಲಿ 2ನೇ ಪೀಳಿಗೆಯ ಆಲ್ ನ್ಯೂ ವೆನ್ಯೂ ಭಾರತೀಯ ಗ್ರಾಹಕರಿಗೆ ಪರಿಚಯವಾಗಿದ್ದು, ಹೊಸ ತಂತ್ರಜ್ಞಾನ, ಭದ್ರತೆ ಮತ್ತು ಶೈಲಿಯ ಪರಿಪೂರ್ಣ ಮಿಶ್ರಣವಾದ ಹೊಸ ಹ್ಯೂಂಡೈ ವೆನ್ಯೂ ತನ್ನ ವಿನೂತನ ಶೈಲಿ ನಮತ್ತು ಆಧುನಿಕ ತಂತ್ರಜ್ಞಾನದಿಂದ ವಾಹನ ಪ್ರಿಯರ ಗಮನ ಸೆಳೆದಿದೆ.

ಹ್ಯೂಂಡೈಯ ಹೊಸ ತಲೆಮಾರಿನ ವೆನ್ಯೂ ವಾಹನ ಪ್ರಿಯರ ಹೊಸ ಆಕರ್ಷಣೆ ಆಗಿ ಮೂಡಿ ಬಂದಿದೆ. ಬಿಡುಗಡೆ ಸಮಾರಂಭದಲ್ಲಿ ಬೆಳ್ತಂಗಡಿ ಅದ್ವೈತ್ ಹುಂಡೈ ಇದರ ಮಾರಾಟ ವ್ಯವಸ್ಥಾಪಕ ಭರತ್ ಶೆಟ್ಟಿ, ಸೇವಾ ವ್ಯವಸ್ಥಾಪಕ ವಿಷ್ಣು ಕುಮಾರ್, ಬಾಡಿ ಶಾಪ್ ಮ್ಯಾನೇಜರ್ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.

ಇದನ್ನು ಓದಿ: ‘ಆಲ್ ನ್ಯೂ ಹ್ಯೂಂಡೈ ವೆನ್ಯೂ’ ಕಾರು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ

ಹ್ಯೂಂಡೈ ವೆನ್ಯೂ ಕಾರಿನ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ನೋಡೋದಾದ್ರೆ 65 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಿಶಿಷ್ಟ ವಿನ್ಯಾಸ, ಕಾರ್ಯಕ್ಷಮತೆಯುಳ್ಳ ಚಾಲಿತ ಚಕ್ರಗಳು, ಬ್ರಾಂಡೆಡ್ ಡ್ಯುಯಲ್-ಟೋನ್ ಲೆದರೆಟ್ ಸೀಟು, 6 ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾಗಳು, ಹೊಸ ಮಾದರಿಯು ಉತ್ತಮ ನಿಲುಗಡೆ ಶಕ್ತಿಯನ್ನು ನೀಡಲು ನಾಲ್ಕು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಒಳಗೊಂಡಿದೆ.

 

Continue Reading

DAKSHINA KANNADA

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪರಿಸರದಲ್ಲಿ ಕಣ್ಮನ ಸೆಳೆದ ಲೋಹದ ಹಕ್ಕಿಗಳು

Published

on

ಮಂಗಳೂರಿನಲ್ಲಿ ಇಂದು ಲೋಹದ ಹಕ್ಕಿಗಳ ಕಲರವ ಕೇಳಿ ಬಂತು. ನಗರ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪರಿಸರದಲ್ಲಿ ಈ ಮನಮೋಹನ ದೃಶ್ಯಗಳನ್ನು ಕಂಡ ವಿದ್ಯಾರ್ಥಿಗಳು, ಸಾರ್ವಜನಿಕರು ನೂತನ ಆವಿಷ್ಕಾರಗಳಿಗೆ ಮನಸೋತರು.

ಸಹ್ಯಾದ್ರಿ ಕಾಲೇಜ್ ಆಫ್‌ ಇಂಜಿನಿಯರಿಂಗ್‌ ಅಂಡ್ ಮ್ಯಾನೇಜ್‌ಮೆಂಟ್‌ ವತಿಯಿಂದ ರಾಷ್ಟ್ರೀಯ ಮಟ್ಟದ ತಾಂತ್ರಿಕ ಕಾರ್ಯಾಗಾರದ ಅಂತಿಮ ದಿನವಾದ ಶನಿವಾರ ಬೆಳಿಗ್ಗೆ ವಿದ್ಯಾರ್ಥಿಗಳು ತಾವು ನೂತನವಾಗಿ ಆವಿಷ್ಕಾರ ಮಾಡಿದ ಏರೋಪ್ಲೇನ್ ಏರ್ ಶೋ ಪ್ರಸ್ತುತ ಪಡಿಸಿದರು. ಸಹ್ಯಾದ್ರಿ ಸಾಯನ್ಸ್‌ ಟ್ಯಾಲೆಂಟ್‌ ಹಂಟ್ ಪ್ರೊಜೆಕ್ಟ್‌ ಇವಾಲ್ಯೂವೇಶನ್‌, ಸಮಾರೋಪ ಸಮಾರಂಭವೂ ಇಂದು ಕಾಲೇಜಿನಲ್ಲಿ ನಡೆಯಿತು.

ಬೆಂಗಳೂರಿನ ಅಭಯ್‌ ಪವಾರ್‌ ಮತ್ತು ಅವರ ತಂಡ ಆಯೋಜನೆ ಮಾಡಿದ ಏರೋಫಿಲಿಯಾ ಏರ್ ಶೋ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿತ್ತು. ಆಕಾಶದೆತ್ತರದಲ್ಲಿ ಪುಟ್ಟದಾದ ಏರೋಪ್ಲೇನ್‌ಗಳು ಹಾರಾಡುತ್ತಿದ್ದರೆ ಎಲ್ಲರೂ ರೋಮಾಂಚನಕಾರಿಯಾಗಿ ವೀಕ್ಷಿಸುತ್ತಿದ್ದರು.

ಇದನ್ನೂ ಓದಿ: ಮಂಗಳೂರು: ಸಹ್ಯಾದ್ರಿ ಕಾಲೇಜಿನಲ್ಲಿ ನ.6ರಿಂದ 8ರವರೆಗೆ ನಡೆಯಲಿದೆ ‘ಸೀನರ್ಜಿಯಾ 2025’

ಇನ್ನು ಏರ್‌ ಶೋದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಏರ್‌ ಶೋ ಹಾರಾಟದ ಬಗ್ಗೆ ಅಭಯ್‌ಕುಮಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ತಮ್ಮ ವಿನೂತನ ಆವಿಷ್ಕಾರ, ಯೋಜನೆಗಳನ್ನು ಪ್ರಸ್ತುತಪಡಿಸಲು ಇಂತಹ ಏರ್‌ಶೋಗಳು ಹೆಚ್ಚು ಪೂರಕವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

Continue Reading
Advertisement

Trending

Copyright © 2025 Namma Kudla News

You cannot copy content of this page