Connect with us

Ancient Mangaluru

170 ವರ್ಷ ಹಿಂದಿನ ವೆನ್‌ಲಾಕ್‌ ಆಸ್ಪತ್ರೆ ಬಗ್ಗೆ ನಿಮಗೆಷ್ಟು ಗೊತ್ತು..!

Published

on

ಮಂಗಳೂರು ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಹೈಟೆಕ್‌ ಆಸ್ಪತ್ರೆಗಳು ಸ್ಪರ್ಧೆಗೆ ಬಿದ್ದವರಂತೆ ಸೇವೆಯನ್ನು ನೀಡುತ್ತಿವೆ. ಅವುಗಳು ಕೆಲವು ದಶಕಗಳ ಹಿಂದೆ ಇಲ್ಲಿ ಸೇವೆಯನ್ನು ನೀಡುತ್ತಿದೆ. ಆದರೆ ಒಂದೂವರೆ ಶತಮಾನದ ಹಿಂದೆಯೇ ಕರಾವಳಿಗರಿಗೆ ಸೇವೆ ನೀಡುತ್ತಿದ್ದ ವೆನ್‌ಲಾಕ್‌ ಆಸ್ಪತ್ರೆ ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.


ಭಾರತ ಸ್ವಾತಂತ್ರ್ಯ ಪಡೆಯುವ ನೂರು ವರ್ಷದ ಹಿಂದೆ ಅಂದರೆ 1848ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ನಿರ್ದೇಶಕರ ಮಂಡಳಿಯ ನಿರ್ಧಾರದ ಮೇರೆಗೆ ಮಂಗಳೂರಿನಲ್ಲಿ ಮಿಲಿಟರಿ ಆಸ್ಪತ್ರೆಯು ಸ್ಥಾಪನೆಗೊಂಡಿತು. ಕಾರಣ ಮಂಗಳೂರು ಕರಾವಳಿಯ ಬ್ರಿಟೀಷ್ ಅಧಿಪತ್ಯದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿಂದಲೇ ದೇಶ ವಿದೇಶಗಳಿಗೆ ದವಸ ಧಾನ್ಯ, ಗೋಡಂಬಿ, ಬೀಡಿ, ಸಾಂಬರು ಪದಾರ್ಥಗಳು, ಮತ್ತಿತರ ವಸ್ತುಗಳು ರಫ್ತಾಗುತ್ತಿದ್ದುವು.

ಲಕ್ಷಾಂತರ ರೂಪಾಯಿಗಳ ವಿದೇಶಿ ವಿನಿಮಯಗಳನ್ನು ತಂದು ಕೊಡುತ್ತಿದ್ದ ಈ ಕರಾವಳಿ ರಕ್ಷಣೆಗೆ ಸೇನೆ ಅಗತ್ಯವಾಗಿ ಬೇಕಾಗಿತ್ತು. ಈ ನಿಟ್ಟಿದಲ್ಲಿ ಮದ್ರಾಸ್ ಪ್ರಾಂತದ ಅಧಿನದಲ್ಲಿರುವ ಮಂಗಳೂರಿನಲ್ಲಿ ಬ್ರೀಟಿಷ್ ಸೇನೆಯನ್ನು ನಿಯೋಜನೆ ಮಾಡಲಾಗಿತ್ತು, ಈ ಸೇನೆಯ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಾಗಿ ಒಂದು ಪ್ರತ್ಯೇಕ ಆಸ್ಪತ್ರೆಯ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಈಗಿನ ಲೇಡಿಗೋಷನ್ ಆಸ್ಪತ್ರೆ ಬಳಿ ಪ್ರಾರಂಭಿಕವಾಗಿ 14ರೂಪಾಯಿ ಬಾಡಿಗೆ ಪಾವತಿಸಿ ಮೊದಲು ಆಸ್ಪತ್ರೆಯನ್ನು ಪ್ರಾರಂಭಿಸಲಾಯಿತು.


ಆರಂಭದ ವರ್ಷದಲ್ಲಿ 45 ಒಳರೋಗಿಗಳು ಮತ್ತು 1447 ಹೊರರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. 1851ರಲ್ಲಿ ಆಸ್ಪತ್ರೆಯನ್ನು ಆಗಿನ ಬ್ರಿಟೀಷ್‌ ಸರಕಾರದಿಂದ ಮಂಜೂರಾದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಆಗಿನ ಮದ್ರಾಸ್ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ವೆನ್‌ಲಾಕ್‌ರವರು ಈಗಿನ ಹಂಪನಕಟ್ಟೆಯಲ್ಲಿನ ವೆನ್‌ಲಾಕ್ ಆಸ್ಪತ್ರೆಯಿರುವ ಸ್ಥಳದಲ್ಲಿ 1919ರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದರು. ಅಂದಿನಿಂದ ಇದು ವೆನ್ಲಾಕ್ ಆಸ್ಪತ್ರೆಯಾಗಿ ಪುನರ್ ನಾಮಕರಣಗೊಂಡಿತು.
1903ರಲ್ಲಿ ಜಂಪನ್ ಎಂಬ ವ್ಯಾಪಾರಿ ಹಾಂಗ್‌ಕಾಂಗ್‌ನಿಂದ ಈ ಊರಿಗೆ ಭೇಟಿ ನೀಡಿದಾಗ 500 ರೂಪಾಯಿಯನ್ನು ಆಪರೇಷನ್ ಥಿಯೇಟರ್ ನಿರ್ಮಿಸಲು ನೀಡಿದ ಉಲ್ಲೇಖವಿದೆ. ಹಾಗೂ 1938ರಲ್ಲಿ ಪ್ರಥಮ ಅಂಬ್ಯುಲೆನ್ಸ್‌ನ್ನು ಕುಡಿ ಭುಜಂಗರಾವ್, ಬೊಂಬಾಯಿ ಅವರು ತನ್ನ ತಂದೆ ಕುಡಿ ಪದ್ಮನಾಭಯ್ಯನವರ ಸವಿನೆನಪಿಗಾಗಿ ದಾನವಾಗಿ ನೀಡಿದ್ದರು.


ಸೊಳ್ಳೆಗಳಿಂದ ಮಲೇರಿಯಾ ಹರಡುವ ವಿಧಾನವನ್ನು ಕಂಡುಹಿಡಿದ ಸರ್. ರೋನಾಲ್ಡ್ ರಾಸ್‌ರವರು 1894ರಲ್ಲಿ ಇಲ್ಲಿ ಸೇವೆ ಸಲ್ಲಿಸಿದ್ದರು.
1975ರಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರೊ.ಎಸ್‌.ಆರ್‌.ಉಳ್ಳಾಲ್‌ ಅವರ ತಂಡದಿಂದ ತೆರೆದ ಶಸ್ತ್ರಚಿಕಿತ್ಸೆ ನಡೆದ ಹೆಗ್ಗಳಿಕೆ ಈ ಆಸ್ಪತ್ರೆಗೆ ಇದೆ. 1947 ರಲ್ಲಿ ಭಾರತ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ ವೆನ್ಲಾಕ್ ಆಸ್ಪತ್ರೆ 100 ವರ್ಷಗಳ ಶತಮಾನೋತ್ಸವದ ಸಂಭ್ರಮದಲ್ಲಿತ್ತು.
2013 ರಂದು ಮಂಗಳೂರಿನ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಹೆಸರನ್ನು ಕುದ್ಮುಲ್ ರಂಗ ರಾವ್ ಮತ್ತು ಲೇಡಿಗೋಶನ್ ಹೆರಿಗೆ ಆಸ್ಪತ್ರೆಗೆ ಉಳ್ಳಾಲ ರಾಣಿ ಅಬ್ಬಕ್ಕಳ ಹೆಸರನ್ನು ಇಡಲು ತೀರ್ಮಾನಿಸಲಾಗಿತ್ತಾರೂ ಆ ಪ್ರಸ್ತಾಪನ ನೆನೆಗುದಿಗೆ ಬಿದ್ದಿದೆ. ಈಗಲೂ ಚಿಕ್ಕಮಗಳೂರು, ಕೊಪ್ಪ, ಉತ್ತರ ಕನ್ನಡ ಸೇರಿದಂತೆ ಉತ್ತರಕರ್ನಾಟಕದ ಹಲವಾರು ಜಿಲ್ಲೆಗಳಿಂದ, ಜೊತೆಗೆ ಪಕ್ಕದ ಕೇರಳ ರಾಜ್ಯದಿಂದ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಬ್ರಿಟೀಷ್‌ ಆಡಳಿತ ಕಾಲದಲ್ಲಿ ಈ ಆಸ್ಪತ್ರೆಯಲ್ಲಿ ಮಡಿಕೇರಿಗರಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಲಾಗಿತ್ತು ಎಂಬುವುದು ಇತಿಹಾಸದಲ್ಲಿ ಉಲ್ಲೇಖವಾಗಿತ್ತು.

ಶತಮಾನ ಹಳೆಯ ವಾಷಿಂಗ್‌ ಮಷೀನ್‌ ಇಲ್ಲಿದೆ

ತೀರಾ ಇತ್ತೀಚಿನವರೆಗೂ ಇಲ್ಲಿ ರೋಗಿಗಳ ಬಟ್ಟೆ ಒಗೆಯಲು ಬಿಸಿ ನೀರಿನ ವಾಷಿಂಗ್‌ ಮಷೀನ್‌ ಇತ್ತು. ಇದರಲ್ಲಿ ರೋಗಿಗಳಿಗೆ ಆರೈಕೆ ವೇಳೆ ಬಳಸಿದ ಬಟ್ಟೆಗಳನ್ನು ಒಗೆಯಲು ಈ ವಾಷಿಂಗ್‌ ಮಷೀನ್‌ ಬಳಸಲಾಗಿತ್ತು. ಕರ್ನಾಟಕದಲ್ಲಿ ಕೇವಲ ಎರಡು ಆಸ್ಪತ್ರೆಗಳಲ್ಲಿ ಮಾತ್ರ ಇಂತಹ ಮೆಷೀನ್‌ಗಳಿದ್ದವು. ಒಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಮಾತ್ರ ಇತ್ತು. ತೀರಾ ಇತ್ತೀಚಿನವೆಗೂ ಇದೇ ವಾಷಿಂಗ್‌ ಮಷೀನ್‌ನಲ್ಲಿ ಬಟ್ಟೆ ತೊಳೆಯಲಾಗುತ್ತಿತ್ತು.

@ ರಾಜೇಶ್ ಫೆರಾವೋ

Ancient Mangaluru

ಕಪ್ಪು ಪಟ್ಟಿ ಧರಿಸಿ ಸೆಮಿಫೈನಲ್ ಆಡುತ್ತಿರುವ ಟೀಂ ಇಂಡಿಯಾ ಆಟಗಾರರು

Published

on

ಮಂಗಳೂರು/ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಇಂದು ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಆದರೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಇಳಿದಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯಕ್ಕೆ ಭಾರತ ಸಜ್ಜಾಗಿತ್ತು. ಆದರೆ ಅದಕ್ಕೂ ಮುನ್ನ ಭಾರತೀಯ ಕ್ರಿಕೆಟ್‌ಗೆ ಆಘಾತಕಾರಿ ಸುದ್ದಿ ಬಂದಿತ್ತು.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ, ಮುಂಬೈ ತಂಡದ ದಂತಕತೆ ಪದ್ಮಾಕರ್ ಶಿವಾಳ್ಕರ್ (84) ನಿಧನರಾಗಿದ್ದಾರೆ. ಸ್ಪಿನ್ನರ್ ಆಗಿ ಮಿಂಚಿದ್ದ ಪದ್ಮಾಕರ್ ಶಿವಾಳ್ಕರ್ ತಮ್ಮ ಒಟ್ಟಾರೆ ವೃತ್ತಿ ಜೀವನದಲ್ಲಿ 550ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು.

ಇದನ್ನೂ ಓದಿ: ಕಬ್ಬಿಣದ ಕಡಲೆಯಾಯಿತಾ ಗಣಿತ…ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳೆಷ್ಟು?

ಹೀಗಾಗಿ ಭಾರತದ ದೇಶಿ ಕ್ರಿಕೆಟಿನಲ್ಲಿ ಅಮೋಘ ಸಾಧನೆ ಮಾಡಿದ್ದ ಸ್ಪಿನ್ ದಂತಕಥೆ ಪದ್ಮಾಕರ್ ಶಿವಾಳ್ಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ್ದಾರೆ.

ಶಿವಾಲ್ಕರ್ ಅವರಿಗೆ ಎಂದೂ ಕೂಡ  ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. 1961-62ರಿಂದ 1987-88ರ ಅವಧಿಯಲ್ಲಿ ಆಡಿದ್ದರು. 124 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 589 ವಿಕೆಟ್‌ಗಳನ್ನು ಕಬಳಿಸಿದ್ದರು.

2017ರಲ್ಲಿ ಶಿವಾಲ್ಕ‌ರ್ ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಪ್ರದಾನ ಮಾಡಿತ್ತು. ಮುಂಬೈ ತಂಡವು 22 ವರ್ಷಗಳಲ್ಲಿ 20 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿತ್ತು. ಅಷ್ಟು ಬಾರಿಯೂ ಶಿವಾಲ್ಕ‌ರ್ ತಂಡದಲ್ಲಿ ಆಡಿದ್ದರು.

 

 

Continue Reading

Ancient Mangaluru

ಆಸ್ತಿಗಾಗಿ ವಕೀಲರಿಬ್ಬರ ನಡುವೆ ಜಗಳ; ಅಣ್ಣನಿಗೆ ಚಾಕು ಇರಿದ ತಮ್ಮ

Published

on

ಮಂಗಳುರು/ಬೆಂಗಳೂರು : ಪಿತ್ರಾರ್ಜಿತ ಆಸ್ತಿಗಾಗಿ ವಕೀಲ ಸಹೋದರರಿಬ್ಬರ ನಡೆವೆ ನಡೆದ ಗಲಾಟೆಯು ಅಣ್ನನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಕೋಡಿಚಿಕ್ಕಹಳ್ಳಿಯಲ್ಲಿ ನಿನ್ನೆ (ಫೆ.28) ಮುಂಜಾನೆ ನಡೆದಿದೆ.

ಕೋಡಿಚಿಕ್ಕಹಳ್ಳಿ ನಿವಾಸಿ ಶ್ರೀಕಾಂತಯ್ಯ (36) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ಮೃತನ ಕಿರಿಯ ಸೋದರ ನರೇಂದ್ರನನ್ನು ಬಂಧಿಸಲಾಗಿದೆ.

ಭೂ ವ್ಯಾಜ್ಯ ಸಂಬಂಧ ಸಹೋದರರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಮಯ ಮಾತಿನ ಚಕಾಮಕಿ ತರಾಕಕ್ಕೇರಿದ್ದು,  ರೊಚ್ಚಿಗೆದ್ದ ತಮ್ಮ ಅಣ್ಣನಿಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಆತನನ್ನು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಶ್ರೀಕಾಂತಯ್ಯ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಕೋಡಿಚಿಕ್ಕಹಳ್ಳಿಯ ಭೂ ಮಾಲಿಕ ತಿಮ್ಮಪ್ಪ ದಂಪತಿಗೆ ಮೂವರು ಮಕ್ಕಳಿದ್ದು, ಅನಾರೋಗ್ಯದಿಂದ ತಂದೆ ಮೃತಪಟ್ಟ ಬಳಿಕ ಅವರ ಮಕ್ಕಳ ಮಧ್ಯೆ ಆಸ್ತಿ ವಿಚಾರವಾಗಿ ಮನಸ್ತಾಪವಾಗಿತ್ತು. ಆರೋಪಿ ನರೇಂದ್ರ ಮೈಸೂರಿನಲ್ಲಿ ವಕೀಲನಾಗಿದ್ದರೆ, ಬೆಂಗಳೂರಿನಲ್ಲಿ ಆತನ ಸೋದರ, ಮೃತ ಶ್ರೀಕಾಂತಯ್ಯ ಕ್ರಿಮಿನಲ್ ಲಾಯರ್ ಆಗಿದ್ದ. ಪದೇ ಪದೇ ಆಸ್ತಿ ಪಾಲು ವಿಷಯವಾಗಿ ಅಣ್ಣ-ತಮ್ಮಂದಿರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಅಂತೆಯೇ ಶುಕ್ರವಾರ ಬೆಳಗ್ಗೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗಟನೆ ಕುರಿತು ಬೆಂಗಳುರಿನ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Continue Reading

Ancient Mangaluru

ನದಿಗೆ ಬಿದ್ದು ಬಾಲಕ ಸಾ*ವು

Published

on

ಬೆಳ್ತಂಗಡಿ: ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಬಾಲಕನೋರ್ವ ಮೃ*ತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ದಂದು ನಡೆದಿದೆ.

ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್ (16) ಮೃತ ಬಾಲಕ. ಪವನ್ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ.

ಇದನ್ನೂ ಓದಿ: ಕಾರು ಪಾರ್ಕ್ ಮಾಡಿದವ ಇಳಿಯಲೇ ಇಲ್ಲ; ಇಣುಕಿ ನೋಡಿದಾಗ ಬಿಗ್ ಶಾಕ್..!

ಅಜ್ಜಿ ಮನೆಗೆಂದು ಬಂದವ ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಮೂಲಕ ದುರಂತ ಅಂತ್ಯ ಕಂಡಿದ್ದಾನೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page