Connect with us

LATEST NEWS

ಕ್ರಿಶ್ಚಿಯನ್ ಧರ್ಮ ತೊರೆದು 170 ಕುಟುಂಬಗಳು ಮತ್ತೆ ಘರ್‌ವಾಪಸ್ಸಿ

Published

on

ನವಸಾರಿ: ಗುಜರಾತ್ ರಾಜ್ಯದ ನವಸಾರಿ ಎಂಬಲ್ಲಿ 170ಕ್ಕೂ ಹೆಚ್ಚು ಕುಟುಂಬಗಳು ಕ್ರಿಶ್ಚಿಯನ್ ಧರ್ಮ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡರು.


ನವಸಾರಿಯ ವಂಸ್ಡಾ ತಾಲೂಕಿನ ಕವ್ಡೇಜ್ ಗ್ರಾಮದಲ್ಲಿ ಅಗ್ನಿವೀರ್ ಹಿಂದೂ ಸಂಘಟನೆ ಆಯೋಜಿಸಿದ್ದ ಶುದ್ಧೀಕರಣ ಮಹಾಯಜ್ಞದಲ್ಲಿ ಮರು ಮತಾಂತರದ ವಿಧಿವಿಧಾನ ನಡೆಯಿತು.
ಇಲ್ಲಿಯವರೆಗೆ 9000ಕ್ಕೂ ಹೆಚ್ಚು ಕುಟುಂಬಗಳು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿವೆ. ಇಲ್ಲಿನ ಬುಡಕಟ್ಟು ಪ್ರದೇಶಗಳಲ್ಲಿ ಸಾಕಷ್ಟು ಮತಾಂತರ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳಿವೆ ಕುಟುಂಬದ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರು ಕ್ರಿಶ್ಚಿಯನ್ ಧರ್ಮ ಸೇರಿದರೆ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಹುಟ್ಟಿಸಿ ಅನೇಕ ಕುಟುಂಬಗಳು ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮ ಸೇರಿಕೊಂಡಿದ್ದವು ಎಂದು ಆರೋಪಿಸಿದ್ದಾರೆ.

ಅಗ್ನಿವೀರ ಹಿಂದೂ ಸಂಘದ ಮಹೇಂದ್ರ ರಾಜಪುರೋಹಿತ್ ಎಂಬವರು ಮಾತನಾಡಿ, “ಕೆಲವು ವರ್ಷಗಳ ಹಿಂದೆ ಹಿಂದೂ ಬುಡಕಟ್ಟು ಜನರು ಕಾರಣಾಂತರಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು ಇಂತಹ ಪ್ರದೇಶಗಳಿಗೆ ಹೋಗಿ ಭಜನೆ ಕೀರ್ತನೆ ಮಾಡಿ ಸಾಮೂಹಿಕ ವಿವಾಹ ಮಾಡಿಸುತ್ತಿದ್ದೆವು ಇದರಿಂದ ಜನರು ಪ್ರಭಾವಿರಾಗಿ ಹಿಂದೂ ಧರ್ಮಕ್ಕೆ ಮರಳಿವೆ.

LATEST NEWS

Watch video: ಉಗ್ರ ಆಮಿರ್ ನಾಝಿರ್‌ ವಾನಿ ಹ*ತ್ಯೆಗೂ ಮುನ್ನ ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

Published

on

ಮಂಗಳೂರು/ಶ್ರೀನಗರ: ಇವತ್ತು ಪುಲ್ವಾಮಾದ ಟ್ರಾಲ್​ನಲ್ಲಿ ಭಾರತೀಯ ಸೇನೆ ಜೈಶ್ ಏ ಮೊಹಮ್ಮದ್​ನ ಮೂವರು ಉಗ್ರರನ್ನ ಹೊಡೆದುರುಳಿಸಿದೆ. ಸೇನೆ, ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಮೂವರ ಹತ್ಯೆಯಾಗಿದೆ.


ಆದರೆ, ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ತನ್ನ ಸಾವಿಗೂ ಮುನ್ನ ಆತನ ತಾಯಿಯೊಂದಿಗೆ ವಿಡಿಯೋಕಾಲ್ ಮೂಲಕ ಮಾತನಾಡಿದ್ದಾನೆ. ಅವನ ತಾಯಿ ಶರಣಾಗುವಂತೆ ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಭಯೋತ್ಪಾದಕ ಅಮೀರ್ ನಜೀರ್‌ವಾನಿ ತನ್ನ ತಾಯಿಯೊಂದಿಗೆ ಮಾತನಾಡುವಾಗ ಎಕೆ 47 ಹಿಡಿದುಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಪುಲ್ವಾಮಾದಲ್ಲಿ ಎನ್‌ಕೌಂಟರ್; ಮೂವರು ಉಗ್ರರ ಹ*ತ್ಯೆ

ಕೊನೆಯ ವಿಡಿಯೋ ಕರೆಯಲ್ಲಿ, ಅಮೀರ್‌ನ ತಾಯಿ ಅವನಿಗೆ ಶರಣಾಗುವಂತೆ ಹೇಳಿದ್ದಾರೆ. ಆದರೆ ಅವನು ತನ್ನ ತಾಯಿ ಮಾತನ್ನು ನಿರಾಕರಿಸಿದ್ದಾನೆ. ಸೈನ್ಯ ಮುಂದೆ ಬರಲಿ, ನಂತರ ನಾನು ನೋಡುತ್ತೇನೆ ಎಂದು ಆತ ಉತ್ತರಿಸಿದ್ದಾನೆ.

Watch video

Continue Reading

LATEST NEWS

ಒಂದೇ ಕುಟುಂಬದ ಮೂವರ ಆತ್ಮಹ*ತ್ಯೆ ಪ್ರಕರಣ; ಎಸ್ಪಿ ಡಾ. ಅರುಣ್‌ ಹೇಳಿದ್ದೇನು?

Published

on

ಉಡುಪಿ: ಕೊರೊನಾ ನಂತರ ಸಂಕಷ್ಟಕ್ಕೆ ಸಿಲುಕಿದ ತಂದೆ ಮತ್ತು ಪುತ್ರ ಬ*ಲಿಯಾದ ಹೃದಯ ವಿದ್ರಾವಕ ಘಟನೆಯೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯಲ್ಲಿ ಗುರುವಾರ ಬೆಳಗ್ಗೆ ಬಾವಿಗೆ ಹಾರಿ ತಂದೆ ಮತ್ತು ಮಗ ಮೃತ ಪಟ್ಟ ಘಟನೆ ಮತ್ತು ಇದಕ್ಕೆ ಕಾರಣವೇನೆಂಬುದರ ಕುರಿತಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೃತ ಮಾಧವ ಮತ್ತು ಅವರ ಪುತ್ರ ಪ್ರಸಾದ್ ಬಸ್ರೂರು ಮೂರು ಕೈ ಬಳಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪತ್ನಿ ತಾರಾ ಅವರು ಗೃಹಿಣಿಯಾಗಿ ಮನೆಯಲ್ಲಿಯೇ ಇರುತ್ತಿದ್ದರು. ಮಾಧವ ಅವರು ಕುಟುಂಬದ ಜತೆ ಸೇರಿ ಮೂರು ಸಂಘಗಳಿಂದ ಸಾಲ ಪಡೆದಿದ್ದು, ಕೊರೊನಾ ಮಹಾಮಾರಿಯ ಬಳಿಕ ಸಾಲ ಮರುಪಾವತಿ ಮಾಡಲು ಕಷ್ಟ ಪಡುತ್ತಿದ್ದರು. ನಿಗದಿತ ಸಮಯಕ್ಕೆ ಸಾಲ ಕಟ್ಟದೆ ಇರುವುದರಿಂದ ಮಾಧವ ಅವರು ನೊಂದಿದ್ದು, ಇದೇ ವಿಚಾರದಲ್ಲಿ ಯಾವಾಗಲೂ ಮನೆಯಲ್ಲಿ ‘ನಾನು ಸಾಯುತ್ತೇನೆ’ ಎಂದು ಹೇಳುತ್ತಿದ್ದರು. ಇಂದು ಬೆಳಗ್ಗೆ ಮಾಧವ ಅವರು ಎದ್ದವರು ಮನೆಯಲ್ಲಿ ಸುಮ್ಮನೇ ಇದ್ದು, ಸುಮಾರು 6 ಗಂಟೆ ವೇಳೆಗೆ ಮನೆಯ ಎದುರಿನ ಬಾವಿಗೆ ಹಾರಿದ್ದಾರೆ. ಆಗ ತಂದೆಯನ್ನು ರಕ್ಷಿಸಲು ಪುತ್ರ ಪ್ರಸಾದ್ ಕೂಡಾ ಬಾವಿಗೆ ಹಾರಿರುತ್ತಾನೆ. ಗಂಡ ಮತ್ತು ಮಗನನ್ನು ರಕ್ಷಿಸಲು ಪತ್ನಿ ತಾರಾ ಅವರು ಕೂಡಾ ಬಾವಿಗೆ ಹಾರಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ; ತಂದೆ, ಮಗ ಸಾವು, ತಾಯಿ ಸ್ಥಿತಿ ಗಂಭೀರ

ಆದರೆ ಪತಿ ಮತ್ತು ಪುತ್ರ ನೀರಿನಲ್ಲಿ ಮುಳುಗಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ತಾರಾ ಅವರಿಗೆ ಈಜಲು ಬರುತ್ತಿದ್ದುದರಿಂದ ಬಾವಿಯಲ್ಲಿದ್ದ ಪೈಪ್ ನ್ನು ಹಿಡಿದುಕೊಂಡು ನಿಂತಿದ್ದರು. ಬಳಿಕ ಊರಿನವರು ಬಂದು ಆಕೆಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಪತಿ ಮಾಧವ (60) ಮತ್ತು ಪುತ್ರ ಪ್ರಸಾದ್ (23) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾರಾ (55) ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಎಸ್.ಪಿ. ಅರುಣ್‌ ಕುಮಾರ್‌ ತಿಳಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Continue Reading

LATEST NEWS

ತಿರುಪತಿಯಲ್ಲಿ ಮಿನಿ ಬಸ್ ಪಲ್ಟಿ; ಕಡಬದ ಮಹಿಳೆ ಸಾವು, ಹಲವರಿಗೆ ಗಾಯ

Published

on

ತಿರುಪತಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಿಂದ ತಿರುಪತಿಗೆ ತೆರಳಿದ್ದ ಯಾತ್ರಾರ್ಥಿಗಳಿದ್ದ ಮಿನಿ ಬಸ್ಸೊಂದು ತಿರುಪತಿ – ಶ್ರೀಕಾಳಹಸ್ತಿ ಹೆದ್ದಾರಿಯಲ್ಲಿ ಇಂದು ಭೀಕರ ಅಪಘಾತಕ್ಕೀಡಾದ ಪರಿಣಾಮ ಓರ್ವ ಮಹಿಳೆ ಮೃತ ಪಟ್ಟು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ಕಡಬ ತಾಲೂಕಿನ ಕೂಸಪ್ಪ ಎಂಬವರ ಪತ್ನಿ ಶೇಷಮ್ಮ (70) ಮೃತ ಪಟ್ಟವರು. ಕೈಕಂಬದ ತಿಲೈಶ್ (45) ಮತ್ತು ಕಮಲಾಕ್ಷಿ (60) ಸೇರಿದಂತೆ ಇತರ ಕೆಲವರು ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. ನಿವೃತ್ತ ಸೈನಿಕರಾದ ಸೋಮಶೇಖರ್, ಶೀನಪ್ಪ, ಕೂಸಪ್ಪ, ನಿಖಿಲ್, ತನುಷ್ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೋಟ: ಟಿಟಿ ವಾಹನ ಪಲ್ಟಿ, 10 ಕ್ಕೂ ಹೆಚ್ಚು ಜನರಿಗೆ ಗಾಯ

ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬದ ಯಾತ್ರಾರ್ಥಿಗಳ ತಂಡವು ಮಂಗಳವಾರ ಗುಂಡ್ಯದಿಂದ ತಿರುಪತಿಗೆ ಪ್ಯಾಕೇಜ್ ಟೂರ್ ಬಸ್‌ನಲ್ಲಿ ತೆರಳಿತ್ತು. ಬುಧವಾರ ಸಂಜೆ ತಿರುಪತಿಯಲ್ಲಿ ತಮ್ಮ ನಿಗದಿತ ದರ್ಶನಕ್ಕೆ ಮುಂಚಿತವಾಗಿ, ಕರ್ನಾಟಕದ ಯಾತ್ರಿಕರು ಮೂರು ಮಿನಿ ಬಸ್‌ಗಳಲ್ಲಿ ಶ್ರೀಕಾಳಹಸ್ತಿಗೆ ತೆರಳುತ್ತಿದ್ದರು. ಈ ಸಂದರ್ಭ ಬಿಳಿನೆಲೆ ಕೈಕಂಬ ತಂಡವನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಫ್ಲೈ ಓವರ್‌ನಲ್ಲಿದ್ದಾಗ ನಿಯಂತ್ರಣ ತಪ್ಪಿ, ಡಿವೈಡರ್‌ ಗೆ ಢಿಕ್ಕಿ ಹೊಡೆದು ಪಲ್ಟಿಯಾಯಿತು ಎಂದು ತಿಳಿದು ಬಂದಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page